ಇರ್ದೆ ಬೆಟ್ಟಂಪಾಡಿ ಪ್ರಾ.ಕೃ.ಪ.‌ ಸಹಕಾರಿ ಸಂಘದ ನೂತನ ಕಟ್ಟಡದಲ್ಲಿ ಸುದರ್ಶನ ಹೋಮ, ನವಗ್ರಹ ಹೋಮ, ವಾಸ್ತು ಹೋಮ

0

ಪುತ್ತೂರು: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕೇಂದ್ರ ಕಚೇರಿಯ ಉದ್ಘಾಟನೆ ಜೂ. 24 ರಂದು ನಡೆಯಲಿದ್ದು, ಅದರ ಪೂರ್ವಭಾವಿಯಾಗಿ ನೂತನ ಕಟ್ಟಡದಲ್ಲಿ ಸುದರ್ಶನ ಹೋಮ, ನವಗ್ರಹ ಹೋಮ, ವಾಸ್ತು ಹೋಮ ಪುರೋಹಿತರಾದ ರಾಧಾಕೃಷ್ಣ ಭಟ್ ಕಕ್ಕೂರುರವರ ನೇತೃತ್ವದಲ್ಲಿ ಜೂ. 18 ರಂದು ರಾತ್ರಿ ನಡೆಯಿತು.
ಮಾಸ್ಟರ್ ಪ್ಲಾನರಿಯ ಮ್ಹಾಲಕ ಎಸ್. ಕೆ. ಆನಂದ್,  ಸಂಘದ ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ರೈ ಕೊಮ್ಮಂಡ, ಶಂಭು ಭಟ್ ಡಿ., ಅಧ್ಯಕ್ಷ ರಂಗನಾಥ ರೈ ಗುತ್ತು, ಉಪಾಧ್ಯಕ್ಷ ಗಿರೀಶ್ವರ ಭಟ್ ಬಾಳೆಗುಳಿ, ನಿರ್ದೇಶಕರಾದ ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು, ಕರುಣಾಕರ ಶೆಟ್ಟಿ‌ ಕೊಮ್ಮಂಡ, ನಾಗರಾಜ್ ಕಜೆ, ಹರೀಶ್ ಗೌಡ ಗುಮ್ಮಟೆಗದ್ದೆ, ಚಂದ್ರನ್ ತಲೆಪ್ಪಾಡಿ, ಶೇಷಪ್ಪ ರೈ ಮೂರ್ಕಾಜೆ, ಸದಾಶಿವ ರೈ ಗುಮ್ಮಟೆಗದ್ದೆ, ದೇವಪ್ಪ ನಾಯ್ಕ ಕೆ., ದೀಪಿಕಾ ಪಿ. ರೈ, ಆಶಾ ಅರವಿಂದ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ ಪಿ.,  ಮಾಸ್ಟರ್ ಪ್ಲಾನರಿಯ ಕ್ಲಾಸ್ – 1 ಗುತ್ತಿಗೆದಾರ ಎಂ.ಎನ್. ಪ್ರಭಾಕರ್, ಪೆನ್ಸೀ  ಇಂಟೀರಿಯರ್ಸ್ ನ ಮ್ಹಾಲಕ ಸತೀಶ್ ರೈ ನೀರ್ಪಾಡಿ, ಶುಭ ಫ್ಯಾನ್ಸಿಯ ಸತೀಶ್ ರೈ ಮೂರ್ಕಾಜೆ, ಸಿಬಂದಿಗಳಾದ ಲಿಂಗಪ್ಪ ಗೌಡ, ಆರ್‌.ಬಿ. ಸುವರ್ಣ, ಮಹಮ್ಮದ್ ಕುಂಞಿ, ಗಂಗಾ ಸಿ., ಸ್ವಾತಿ ಎಂ., ಬಾಲಕೃಷ್ಣ ನಾಯ್ಕ, ರವಿ ಗುಂಡ್ಯಡ್ಕ, ನವ್ಯ, ತುಳಸಿ ಉಪಸ್ಥಿತರಿದ್ದರು.
ಇಂದು ಗಣಪತಿ ಹೋಮ ನೂತನ ಕಟ್ಟಡದಲ್ಲಿ ಗಣಪತಿ ಹವನ ಜೂ. 19 ರಂದು ಬೆಳಿಗ್ಗೆ 7 ರಿಂದ ನಡೆಯಲಿದೆ.

LEAVE A REPLY

Please enter your comment!
Please enter your name here