ಬೆಳ್ಳಾರೆ ಜ್ಞಾನದೀಪ ಸಂಸ್ಥೆಗೆ ಉತ್ತಮ ಫಲಿತಾಂಶ-ವಾಣಿಜ್ಯ ವಿಭಾಗ ಶೇ.92, ಕಲಾ ವಿಭಾಗ ಶೇ.80

0

ಪುತ್ತೂರು: ಎಸ್.ಎಸ್.ಎಲ್.ಸಿಯಿಂದ ನೇರವಾಗಿ ಅಥವಾ ಪ್ರಥಮ ಪಿಯುಸಿ ಅನುತ್ತೀರ್ಣರಾಗಿ ನೇರವಾಗಿ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿರುವ ಬೆಳ್ಳಾರೆ ಜ್ಞಾನದೀಪ ಶಿಕ್ಷಣ, ತರಬೇತಿ ಅಭಿವೃಧ್ಧಿ ಸಂಸ್ಥೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ವಾಣಿಜ್ಯ ವಿಭಾಗದ ವಿಭಾಗದ 13 ವಿದ್ಯಾರ್ಥಿಗಳ ಪೈಕಿ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ.92, ಕಲಾ ವಿಭಾಗದ 10 ವಿದ್ಯಾರ್ಥಿಗಳ ಪೈಕಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.80 ಫಲಿತಾಂಶ ದಾಖಲಾಗಿದೆ. 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 6 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದ ಪುನೀತ್ ಎನ್ ಎಮ್ (502), ವಾಣಿಜ್ಯ ವಿಭಾಗದ ವಿಘ್ನೇಶ್ (469), ಸಲ್ಮಾನ್ ಫಾರಿಸ್ ಎ (446) ಪ್ರಮಿತ್ ಕೆ.ಬಿ(444), ಮಹಮ್ಮದ್ ಝಾಹಿದ್ ಬಿ.ಎಂ(418) ಮೇಘನಾ ಕೆ.ಎಸ್ (401) ಅತೀಹೆಚ್ಚು ಅಂಕ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here