ವಿಟ್ಲ: ಕಾಲೇಜು ವಿದ್ಯಾರ್ಥಿನಿಯೋರ್ವರು ನಾಪತ್ತೆಯಾಗಿರುವ ಕುರಿತು ಆವರ ಸಂಬಂಧಿಯೋರ್ವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೂಲತಃ ಕಡಬ ನಿವಾಸಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಅಕ್ಷತಾ (20 ವ.) ನಾಪತ್ತೆಯಾದವರಾಗಿದ್ದಾರೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸೆರ್ಕಳ ದಿ. ಆನಂದ ಗೌಡರವರ ಪುತ್ರ ಉದಯಕುಮಾರ್ ದೂರುದಾರರಾಗಿದ್ದಾರೆ.
ನನ್ನ ಅಕ್ಕನ ಮಗಳಾದ ಅಕ್ಷತಾರವರು ಕಾಲೇಜಿಗೆ ಹೋಗುವ ನಿಟ್ಟಿನಲ್ಲು ನಮ್ಮ ಮನೆಯಲ್ಲಿ ವಾಸವಿದ್ದು ಜೂ.17ರಂದು ಎಂದಿನಂತೆ ಕಾಲೇಜಿಗೆ ತೆರಳಿದವರು ಸಾಯಂಕಾಲವಾದರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಆಕೆಯ ಮನೆಗೆ ತೆರಳಿರಬಹುದೆಂದು ಗ್ರಹಿಸಿ ನಾವು ಸುಮ್ಮನಿದ್ದೆವು. ಆದರೆ ಆಕೆ ಅಲ್ಲಿಗೂ ತೆರಳಲಿಲ್ಲ ಎನ್ನುವ ಮಾಹಿತಿ ತಿಳಿದ ಬಳಿಕ ಆಕೆಗಾಗಿ ವಿವಿದೆಡೆ ಹುಡುಕಾಟ ನಡೆಸಿದೆವು. ಆದರೂ ಆಕೆ ಪತ್ತೆಯಾಗಿಲ್ಲ ಎಂದು ಅವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.