ಪುತ್ತೂರು : 2021-22ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶ್ರಾವ್ಯ ಕನ್ಯಾನರವರು ವಿಜ್ಞಾನ(PCMB) ವಿಭಾಗದಲ್ಲಿ ಶೇ.95.16 (571/600)ಅಂಕಗಳನ್ನು ಪಡೆದು ತೇರ್ಗಡೆ ಹೊಂದಿರುತ್ತಾರೆ.
ಇವರು ಬೆಂಗಳೂರು ಪದ್ಮನಾಭನಗರ ಕುಮಾರನ್ಸ್ ಪಿ.ಯು. ಕಾಲೇಜಿನ ವಿದ್ಯಾರ್ಥಿಯಾಗಿದ್ದು ಪುತ್ತೂರು ತಾಲೂಕು ಹಿರೇಬಂಡಾಡಿ ಗ್ರಾಮದ, ಸಿವಿಲ್ ಇಂಜಿನಿಯರ್ ಚೆನ್ನಕೇಶವ ಕನ್ಯಾನ ಮತ್ತು ಜಯಾಶೀಲಾ ಕೇಶವ ಕನ್ಯಾನ ದಂಪತಿ ಪುತ್ರಿ. ಇವರು ಚಿತ್ರಕಲೆಯ ಮೂರನೇ ವರ್ಷದ ಡಿಪ್ಲೋಮಾ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿದ್ದು ನಾಲ್ಕನೇ ಹಂತದ ಸಿದ್ಧತೆಯಲ್ಲಿದ್ದಾರೆ.