ವಿಟ್ಲ: ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ವಿಟ್ಲ ಠಾಣಾ ಪೊಲೀಸರು ಕಡಬದಿಂದ ಪತ್ತೆ ಹಚ್ಚಿ ಕರೆತಂದಿದ್ದಾರೆ.
ಮೂಲತಃ ಕಡಬ ನಿವಾಸಿ, ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಅಕ್ಷತಾ (20 ವ.) ರವರು ತನ್ನ ಸಂಬಂದಿ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಸೆರ್ಕಳ ದಿ. ಆನಂದ ಗೌಡರವರ ಪುತ್ರ ಉದಯಕುಮಾರ್ ರವರ ಮನೆಯಲ್ಲಿ ಉಳಿದುಕೊಂಡು ಕಾಲೇಜಿಗೆ ಹೋಗುತ್ತಿದ್ದರು.
ಜೂ.17ರಂದು ಕಾಲೇಜಿಗೆಂದು ತೆರಳಿದ್ದ ಅಕ್ಷತಾ ಸಾಯಂಕಾಲವಾದರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಬಳಿಕ ಅವರ ಮೊಬೈಲ್ ಸ್ವಿಚ್ ಆ- ಆಗಿದ್ದು, ಆಕೆಯ ಮನೆಗೆ ತೆರಳಿರಬಹುದೆಂದು ಗ್ರಹಿಸಿ ನಾವು ಸುಮ್ಮನಿದ್ದೆವು. ಆದರೆ ಆಕೆ ಅಲ್ಲಿಗೂ ತೆರಳಲಿಲ್ಲ ಎನ್ನುವ ಮಾಹಿತಿ ತಿಳಿದ ಬಳಿಕ ಆಕೆಗಾಗಿ ವಿವಿಧೆಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ ಎಂದು ಉದಯಕುಮಾರ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜೂ.೧೯ರಂದು ಕಡಬದಲ್ಲಿರುವ ಆಕೆಯ ಸಂಬಂಽಕರ ಮನೆಯಿಂದ ಪತ್ತೆಹಚ್ಚಿ ಕರೆತಂದು ಹೆತ್ತವರೊಂದಿಗೆ ಕಳಿಸಿಕೊಟ್ಟಿದ್ದಾರೆ.