ಪುತ್ತೂರು : ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೊ ಚಿತ್ತ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಪುತ್ತೂರು ಶಾಖೆಯ ಸಕ್ರಿಯ ಸದಸ್ಯ ಚಿಕ್ಕಮುಡ್ನೂರು ಗ್ರಾಮದ ಏನಿಮುಗ್ರು ಧರ್ಮ ನಿಲಯದ ಧನ್ಯಕುಮಾರ್ ರೈರವರ ಅಂಜಿಯೋಗ್ರಾಮ್ ಚಿಕಿತ್ಸೆಗೆ ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲರವರು 5೦,೦೦೦ ರೂ. ಧನಸಹಾಯದ ಚೆಕ್ ಹಸ್ತಾಂತರಿಸಿದರು. ಮುಖ್ಯ ಮಾರುಕಟ್ಟೆ ವ್ಯವಸ್ಥಾಪಕ ಜಯರಾಮ ಶೆಟ್ಟಿ, ಕ್ಯಾಂಪ್ಕೊ ಪುತ್ತೂರು ಶಾಖಾಧಿಕಾರಿ ಅಮರೇಶ ಪಿ, ಮತ್ತು ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.