ಪುತ್ತೂರು:ಆರ್ಯಾಪು ಗ್ರಾಮದ ಪ್ರಸಿದ್ಧ ಕಾರಣಿಕ ಕ್ಷೇತ್ರ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ವತಿಯಿಂದ ಭತ್ತದ ಬೇಸಾಯ ನಡೆಸಲಾಯಿತು. ಸೋಮವಾರ ಬೆಳಗ್ಗೆ ದೇವಳದ ಅಧೀನ ಕ್ಷೇತ್ರ ಉಳ್ಳಾಲ್ತಿ , ಉಳ್ಳಾಕುಲು ಪರಿವಾರ ದೈವಸ್ಥಾನದ ಬಳಿ ಯಾಂತ್ರೀಕೃತ ಭತ್ತದ ನೇಜಿ ನಾಟಿ ಮಾಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು, ಸದಸ್ಯರಾದ ದೇವಯ್ಯ ಗೌಡ ದೇವಸ್ಯ, ವಿಠಲ ರೈ ಮೇರ್ಲ, ಭಾರತಿ ಶಾಂತಪ್ಪ ಪೂಜಾರಿ, ಭತ್ತದ ಕೃಷಿಕ ರಮಾನಂದ ಬಲ್ಯಾಯ, ಸುದರ್ಶನ ಭಟ್ ಕಾರ್ಪಾಡಿ ಉಪಸ್ಥಿತರಿದ್ದರು. ಗದ್ದೆ ನಿರ್ಮಾಣದಲ್ಲಿ ರಮಾನಂದ ಬಲ್ಯಾಯ, ಶಾಂತಪ್ಪ ಪೂಜಾರಿ ಸಹಕರಿಸಿದರು.