ಬಡಗನ್ನೂರು: ಕೊಯಿಲ ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧ ಪ್ರಮಾಣ ವಚನ ಸ್ವೀಕರಿಸಲಾಯಿತು.
ಮುಖ್ಯ ಶಿಕ್ಷಕಿ ಪುಷ್ಪಾವತಿ ಎಂ ಬಿ ಮಕ್ಕಳಿಗೆ ಲಂಚ, ಭ್ರಷ್ಟಾಚಾರ ವಿರುದ್ಧ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಂದರ ನಾಯ್ಕ ತಲೆಂಜಿ, ಸದಸ್ಯ ನಾಗೇಶ್ ತಲೆಂಜಿ , ಶಿಕ್ಷಕರಾದ ಗಿರೀಶ ಡಿ, ಅತಿಥಿ ಶಿಕ್ಷಕಿ ಸರಳಾ ಡಿ ಗೌರವ ಶಿಕ್ಷಕಿ ಪೂರ್ಣಿಮಾ, ಅಡುಗೆ ಸಿಬ್ಬಂದಿಗಳಾದ ಸುಜಾತಾ, ವಸಂತಿ ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.