ಪುತ್ತೂರು : ಪಡೀಲ್ ಚೈತನ್ಯ ಮಿತ್ರವೃಂದದ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ಪಡೀಲ್ನ ಎಂ. ಡಿ.ಎಸ್ ಸಭಾಂಗಣದಲ್ಲಿ ನಡೆಲಾಯಿತು.
ಸೌಮ್ಯ ಪುರಂದರ್ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಚೈತನ್ಯ ಮಿತ್ರ ವ್ರಂದದ ಅಧ್ಯಕ್ಷ ಪುರಂದರ್ ಪಡೀಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಬಿ. ಸ್ವಾಗತಿಸಿ, ಖಜಾಂಚಿ ಚಂದ್ರಶೇಖರ ಕೇಪುಳು ವಂದಿಸಿದರು. ರಮೇಶ್ ಬಿ. ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕರಾದ ಸಂಪತ್ ಕುಮಾರ್ ಜೈನ್, ಗಣೇಶ್ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೌಮ್ಯ ಪುರಂದರ್ರವರ ಮಾರ್ಗದರ್ಶನದಲ್ಲಿ, ಮಾನವೀಯತೆಗಾಗಿ ಯೋಗ ಎಂಬ ಧ್ಯೇಯ ವಾಕ್ಯದೊಂದಿಗೆ ಯೋಗಾಭ್ಯಾಸ ನಡೆಸಲಾಯಿತು. ಸಂಸ್ಥೆಯ ಸದಸ್ಯರು ಯೋಗಾಭ್ಯಾಸದಲ್ಲಿ ಪಾಲ್ಗೊಂಡರು.