ಪುತ್ತೂರು: ಸರ್ವೆ ಎಸ್ಜಿಎಂ ಪ್ರೌಢ ಶಾಲೆಯಲ್ಲಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಅಶೋಕ್ ಎಸ್.ಡಿ ಅಧ್ಯಕ್ಷತೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು. ಷಣ್ಮುಖ ಯುವಕ ಮಂಡಲದ ಅಧ್ಯಕ್ಷ ಗೌತಮ್ರಾಜ್ ಕರಂಬಾರು ದೀಪ ಪ್ರಜ್ವಲಿಸಿ ಯೋಗದ ಮಹತ್ವ ತಿಳಿಸಿ ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿಗಳು ಓಂಕಾರದೊಂದಿಗೆ ವಿವಿಧ ಪ್ರಾಣಾಯಾಮಗೈದು ಯೋಗ ಪ್ರದರ್ಶನ ಮಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಶ್ರೀನಿವಾಸ್ ಯೋಗ ಸಂಕಲ್ಪವನ್ನು ಬೋಧಿಸಿ ಸ್ವಾಗತಿಸಿದರು. ಶಾಲಾ ಯೋಗ ಪಟುಗಳಾದ ಆತ್ಮಿಕಾ, ಗ್ರೀಷ್ಮಾ, ಪೂಜಾಶ್ರೀ, ಅಮೃತಾ, ಪ್ರತೀಕಾ, ಜ್ಯೋತಿಕಾ, ಕೃಪಾ, ರಶ್ಮಿ, ಶಿವನೀತ್, ಹರ್ಷಿತ್, ಜಿತೇಶ್ರವರು ವಿವಿಧ ಯೋಗಾಸನಗಳನ್ನು ಮಾಡಿದರು. ಶಿಕ್ಷಕಿ ಪುಷ್ಪಾ, ಶಿಕ್ಷಕರಾದ ಮೋಹನ್ ಕುಮಾರ್, ವಿಜಯ ಕುಮಾರ್, ಅಕ್ಷತಾ, ಮಧುಶ್ರೀ, ಕುಮಾರಿ ಜಯಶ್ರೀ ಸಹಕರಿಸಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು.