ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಆಶ್ರಯದಲ್ಲಿ ಕುತ್ಯಾಡಿ ಸತೀಶ್ ರೈಯವರ ಪ್ರಾಯೋಜಕತ್ವದಲ್ಲಿ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ 20,000 ರೂ ಗಳ ಚೆಕ್ ಅನ್ನು ಉಪಾಧ್ಯಕ್ಷೆ ಸ್ವರ್ಣಲತಾ ಜೆ. ರೈಯವರ ಸಹಕಾರದೊಂದಿಗೆ ಅಧ್ಯಕ್ಷೆ ಸಬಿತಾ ಭಂಡಾರಿಯವರು ಹಸ್ತಾಂತರಿಸಿದರು.


ಡಾ. ಶೃತಿ ರೈ ಹಾಗೂ ಮಹಿಳಾ ಬಂಟರ ಸಂಘದ‌ ಪ್ರಧಾನ ಕಾರ್ಯದರ್ಶಿಯಾಗಿರುವ ಹರಿಣಾಕ್ಷಿ ಜೆ.ಶೆಟ್ಟಿಯವರು ಗುರುಸೇವಾ ಬಳಗ ಪುತ್ತೂರು ಪ್ರದಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದಕ್ಕೆ ಸಂಘದ ವತಿಯಿಂದ ಅಭಿನಂದಿಸಲಾಯಿತು. ಸಮಾರಂಭದಲ್ಲಿ ಮಹಿಳಾ ಬಂಟರ ಸಂಘದ ಮಾಜಿ ಅಧ್ಯಕ್ಷೆ ಕುಮುದಾ ಎಲ್.ಎನ್.ಶೆಟ್ಟಿ, ಕೋಶಾಧಿಕಾರಿ ವಾಣಿ ಶೆಟ್ಟಿ ನೆಲ್ಯಾಡಿ, ಉಪಾಧ್ಯಕ್ಷರುಗಳು ಹಾಗೂ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here