ಬೆಟ್ಟಂಪಾಡಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣಪತಿ ವಿಗ್ರಹ ರಚನೆಗೆ ಮುಹೂರ್ತ

0

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣೇಶ ವಿಗ್ರಹ ನಿರ್ಮಾಣಕ್ಕೆ ಮುಹೂರ್ತ ಜೂ. 22 ರಂದು ಪರ್ಲಡ್ಕದಲ್ಲಿ ನಡೆಯಿತು. ವಿಗ್ರಹ ಶಿಲ್ಪಿ ತಾರನಾಥ ಆಚಾರ್ಯ ಮಹೂರ್ತ ನೆರವೇರಿಸಿದರು.


ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಸದಸ್ಯರಾದ ದುರ್ಗಾಪ್ರಸಾದ್ ಜೆ., ಸತೀಶ್ ರೈ ಮೂರ್ಕಾಜೆ, ಶಿವಪ್ರಸಾದ್ ತಲೆಪ್ಪಾಡಿ, ಪ್ರವೀಣ್ ರೈ ಬರೆ, ಶರತ್ ಕುಮಾರ್ ಪಾರ, ಜಗದೀಶ್ ಸುವರ್ಣ, ರವಿರಾಜ್ ಅಮೀನ್,‌ ಉಮೇಶ್ ಮಿತ್ತಡ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here