ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಗಣೇಶ ವಿಗ್ರಹ ನಿರ್ಮಾಣಕ್ಕೆ ಮುಹೂರ್ತ ಜೂ. 22 ರಂದು ಪರ್ಲಡ್ಕದಲ್ಲಿ ನಡೆಯಿತು. ವಿಗ್ರಹ ಶಿಲ್ಪಿ ತಾರನಾಥ ಆಚಾರ್ಯ ಮಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಸದಸ್ಯರಾದ ದುರ್ಗಾಪ್ರಸಾದ್ ಜೆ., ಸತೀಶ್ ರೈ ಮೂರ್ಕಾಜೆ, ಶಿವಪ್ರಸಾದ್ ತಲೆಪ್ಪಾಡಿ, ಪ್ರವೀಣ್ ರೈ ಬರೆ, ಶರತ್ ಕುಮಾರ್ ಪಾರ, ಜಗದೀಶ್ ಸುವರ್ಣ, ರವಿರಾಜ್ ಅಮೀನ್, ಉಮೇಶ್ ಮಿತ್ತಡ್ಕ ಉಪಸ್ಥಿತರಿದ್ದರು.