ಪುತ್ತೂರು; ಭಕ್ತಕೋಡಿ ಯಲ್ಲಿ ಮನೆಯೊಂದರ ಮೇಲ್ಚಾವಣಿ ಸಂಪೂರ್ಣ ಹದಗೆಟ್ಟು ಹೋಗಿ ಮಳೆ ನೀರು ಸೋರುತ್ತಿದ್ದ ಮನೆಗೆ ಹಿಂದು ಜಾಗರಣ ವೇದಿಕೆ ಸರ್ವೆ ರಕ್ತೇಶ್ವರಿ ಶಾಖೆಯಿಂದ ತುರ್ತಾಗಿ ಟರ್ಪಾಲು ಅಳವಡಿಸಿಕೊಟ್ಟಿದ್ದಾರೆ.
ತಮ್ಮ ಮನೆ ಸೋರುತ್ತಿದ್ದು ವಾಸಿಸಲು ಸಾಧ್ಯವಿಲ್ಲದೇ ಇರುವ ಬಗ್ಗೆ ಮನೆಯವರು ಹಿಂದು ಜಾಗರಣ ವೇದಿಕೆ ಕಾರ್ಯರ್ತರಲ್ಲಿ ಅಸಹಾಯಕತೆಯನ್ನು ಹೇಳಿಕೊಂಡಾಗ ಕೂಡಲೇ ಸ್ಪಂದಿಸಿದ ಹಿಂದು ಜಾಗರಣ ವೇದಿಕೆ ರಕ್ತೇಶ್ವರಿ ಶಾಖೆಯ ಕಾರ್ಯಕರ್ತರು ಟಾರ್ಪಾಲು ತುರ್ತಾಗಿ ಅಳವಡಿಸಿಕೊಡುವ ಮೂಲಕ ತಾತ್ಕಾಲಿಕ ಪರಿಹಾರ ಒದಗಿಸಿಕೊಟ್ಟಿರುತ್ತಾರೆ.
ಹಿಂದು ಜಾಗರಣ ವೇದಿಕೆ ಸರ್ವೆ ಇದರ ಅಧ್ಯಕ್ಷ ಜಯಂತ್ ಬಿ, ಕಾರ್ಯದರ್ಶಿ ಲಕ್ಷ್ಮೀಶ್ ರೈ ಸರ್ವೆ, ಜನಾರ್ಧನ ಸರ್ವೆ, ಗೌತಮ್ ರೈ ಸರ್ವೆ, ನವೀನ್ ರೈ ಸರ್ವೆ, ಕೀರ್ತಿ ಗೌಡ, ಭರತ್ ಸರ್ವೆ, ವಸಂತ ಸರ್ವೆ, ಯೋಗೀಶ್,ಸುಂದರ,ಜೀತೇಶ್ , ಶರತ್, ಮತ್ತು ಮನೆಯವರು ಉಪಸ್ಥಿತರಿದ್ದರು.