ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ

0

ಪುತ್ತೂರು: ಬೆಂಗಳೂರಿನ ಇಲೆಕ್ಟ್ರೀಕಲ್ ತ್ರಿಚಕ್ರ ವಾಹನ ಉತ್ಪಾದನೆ ಮಾಡುತ್ತಿರುವ ’ಅಲ್ಟಿಗ್ರೀನ್ ಡ್ರೈವ್ ಇಲೆಕ್ಟ್ರಿಕ್’ ಕಂಪೆನಿಯವರು ಜೂ. 22ರಂದು ಕೊಂಬೆಟ್ಟು ಶ್ರೀ ಮಹಾಲಿಂಗೇಶ್ವರ ಐಟಿಐಯಲ್ಲಿ ಕ್ಯಾಂಪಸ್ ಸಂದರ್ಶನ ನಡೆಸಿದರು.

ಗೌಡ ವಿದ್ಯಾ ಸಂಘ (ರಿ) ಸುಳ್ಯದ ಜೊತೆ ಕಾರ್ಯದರ್ಶಿ ಮತ್ತು ಶ್ರೀ ಮಹಾಲಿಂಗೇಶ್ವರ ಐಟಿಐ ನಿರ್ದೇಶಕ ಕಿಶೋರ್ ಕುಮಾರ್ ನೆಲ್ಲಿಕಟ್ಟೆ ಶುಭಹಾರೈಸಿದರು. ಶ್ರೀ ಮಹಾಲಿಂಗೇಶ್ವರ ಐಟಿಐ, ಸರಕಾರಿ ಐಟಿಐ ನರಿಮೊಗರು, ಸರಕಾರಿ ಐಟಿಐ ವಿಟ್ಲ, ಒಡಿಯೂರು ಗುರುದೇವ ಐಟಿಐ, ಕೆವಿಜಿ ಐಟಿಐ ಸುಳ್ಯ, ಬೆಥನಿ ಐಟಿಐ ನೆಲ್ಯಾಡಿ, ಶ್ರೀ ಪಂಚಲಿಂಗೇಶ್ವರ ಐಟಿಐ ನಿಂತಿಕಲ್ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಭಾಗವಹಿಸಿದ್ದರು. ಸಂಚಾಲಕರಾದ ಯು. ಪಿ. ರಾಮಕೃಷ್ಣ ಅವರ ಮಾರ್ಗದರ್ಶನದ ಅನುಸಾರವಾಗಿ ಸಂದರ್ಶನ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here