ಬೆಟ್ಟಂಪಾಡಿ: ಸ.ಪ್ರ.ದ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಭೆ

0

ಬೆಟ್ಟಂಪಾಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಸಭೆಯು ಸಂಘದ ಅಧ್ಯಕ್ಷರಾದ ರಾಜೇಶ್ ನೆಲ್ಲಿತ್ತಡ್ಕ ಇವರ ಅಧ್ಯಕ್ಷತೆಯಲ್ಲಿ ಜೂ. 19 ರಂದು ನಡೆಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ವರದರಾಜ ಚಂದ್ರಗಿರಿಯವರು ಕಾಲೇಜಿನ ಶೈಕ್ಷಣಿಕ ಮತ್ತು ಇತರ ಚಟುವಟಿಕೆಗಳು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಮಹತ್ವ ಹಾಗೂ ಕೆಲಸ ಕಾರ್ಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಬಳಿಕ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯಕಾರಿ ಸಮಿತಿಗೆ ನೂತನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಮುಂದಿನ ಸಾಲಿಗೆ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಗುರು ರಾಜೇಶ್ ನೆಲ್ಲಿತ್ತಡ್ಕ ಅಧ್ಯಕ್ಷರಾಗಿ, ವಿಶ್ವನಾಥ ಬೈಲಾಮೂಲೆ ಉಪಾಧ್ಯಕ್ಷರಾಗಿ, ಡಾ. ಪ್ರಮೋದ್ ಎಂ. ಜಿ. ಕಾರ್ಯದರ್ಶಿಯಾಗಿ ಹಾಗೂ  ಸಂಧ್ಯಾ ಸುವರ್ಣ ಜತೆ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದರು. ಸಂಘಟನಾ ಕಾರ್ಯದರ್ಶಿಯಾಗಿ ಡಾ. ವಿಷ್ಣುಕುಮಾರ್ ಹಾಗೂ ಅಭಿನೇತ್ರ, ಸಂಘದ ಕಾನೂನು ಸಲಹೆಗಾರರಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸಿಬಿಐನಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಶಿವಾನಂದ ಪೆರ್ಲ, ಕೋಶಾಧಿಕಾರಿಯಾಗಿ ಅಕ್ಷಯ್ ಬಿ.ರವರು ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನಾರಾಯಣ ನಾಯ್ಕ್, ರಾಮ ಕೆ., ದೀಕ್ಷಿತ್ ಕುಮಾರ್, ಶ್ರೀಮತಿ ವಿದ್ಯಾಕುಮಾರಿ, ಭವ್ಯ, ಚಂದ್ರಶೇಖರ ಡಿ., ಹರಿಶ್ಚಂದ್ರ, ಉಮೇಶ್ ಮಿತ್ತಡ್ಕ, ಪ್ರಮೋದ್ ಕುಮಾರ್, ಜಯಪ್ರಕಾಶ್, ಪ್ರಮೋದ್ ಚೆಲ್ಯಡ್ಕ, ವನಿತಾ, ಪವನ್, ಪ್ರಜ್ಞಾ, ರಾಜೇಶ್ ಬಜಕುಡ್ಲು, ದಾಮೋದರವರನ್ನು ಆಯ್ಕೆ ಮಾಡಲಾಯಿತು. ಕಾಲೇಜಿನ ಪ್ರಾಂಶುಪಾಲರು ಗೌರವಾಧ್ಯಕ್ಷರಾಗಿ ಹಾಗೂ ಸಂಚಾಲಕರಾಗಿ ಡಾ. ಪೊಡಿಯ ಅವರನ್ನು ನಿಯೋಜಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಗ್ರಂಥಪಾಲಕರಾದ ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು. ವಿವಿಧ ಶೈಕ್ಷಣಿಕ ವರ್ಷಗಳ ವಿದ್ಯಾರ್ಥಿಗಳು ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.

LEAVE A REPLY

Please enter your comment!
Please enter your name here