ಸವಣೂರು ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್‌ನಿಂದ ಗಣರಾಜ್ಯ ರಕ್ಷಿಸಿ ಅಭಿಯಾನ-ಕ್ರೀಡಾಕೂಟ

0

ಪುತ್ತೂರು: ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್ ಸವಣೂರು ವತಿಯಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ ಪ್ರಯುಕ್ತ ಸಾರ್ವಜನಿಕ ಸೌಹಾರ್ದ ಕ್ರೀಡಾಕೂಟ ಸವಣೂರು ಅತ್ತಿಕೆರೆ ಮೈದಾನದಲ್ಲಿ ನಡೆಯಿತು. ಅಲ್ ಹಿದಾಯ ಸ್ಪೋರ್ಟ್ಸ್ ಕ್ಲಬ್ ಸವಣೂರು ಇದರ ಅಧ್ಯಕ್ಷ ರಫೀಕ್ ಕೆನರಾ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಕಾರ್ಯಕ್ರಮ ಉದ್ಘಾಟಿಸಿದರು.

 

ಕ್ರೀಡಾಕೂಟವನ್ನು ಸವಣೂರು ಚಾಪಳ್ಳ ಅಲ್ ನೂರ್ ಮುಸ್ಲಿಂ ಯೂತ್ ಫೆಡರೇಷನ್‌ನ ಅಧ್ಯಕ್ಷ ಝಕರಿಯ ಮಾಂತೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ ಸದಸ್ಯರಾದ ರಝಾಕ್ ಕೆನರಾ, ಬಾಬು ಎನ್, ರಫೀಕ್ ಎಂ.ಎ, ಮಾಜಿ ಸದಸ್ಯರಾದ ಕೃಷ್ಣಪ್ಪ ಸುಣ್ಣಜೆ ಹಾಗೂ ಇರ್ಷಾದ್ ಸರ್ವೆ, ಎಂ.ಎಸ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭ:
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗಣರಾಜ್ಯ ರಕ್ಷಿಸಿ ಅಭಿಯಾನದ ಪುತ್ತೂರು ಸಹ ಸಂಚಾಲಕ ಸಾದಿಕ್ ಹಾಜಿ ಕೂರ್ನಡ್ಕ ವಹಿಸಿದ್ದರು. ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಸಂದೇಶ ಭಾಷಣ ಮಾಡಿದರು.

ಕ್ರೀಡಾಕೂಟದಲ್ಲಿ ವಿಜಯಿಯಾದ ತಂಡಗಳಿಗೆ ಬಹುಮಾನ ವಿತರಣೆಯನ್ನು ಎಸ್‌ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು ನೆರವೇರಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲಾರ್ಪೆ, ಸವಣೂರು ಚಾಪಳ್ಳ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಉಮರ್ ಹಾಜಿ ಕೆನರಾ, ಪಿಎಫ್‌ಐ ಪುತ್ತೂರು ಸಿಟಿ ಡಿವಿಜನ್ ಅಧ್ಯಕ್ಷ ಉಮ್ಮರ್ ಕೂರ್ನಡ್ಕ, ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಅಧ್ಯಕ್ಷ ಸಿರಾಜ್ ಕೂರ್ನಡ್ಕ, ಸಿದ್ದಿಕ್ ಇಡಿಕಿ, ಅಶ್ರಫ್ ಉರ್ಸಾಗ್, ರಫೀಕ್ ಸೋಂಪಾಡಿ, ಉಮ್ಮರ್ ಕಣಿಮಜಳು, ಸಂಶುದ್ದೀನ್ ಮಾಂತೂರು, ಉಬೈದ್ ದುಬೈ ಉಪಸ್ಥಿತರಿದ್ದರು. ಗಣರಾಜ್ಯ ರಕ್ಷಿಸಿ ಅಭಿಯಾನದ ಸಂಚಾಲಕ ಸಿದ್ದಿಕ್ ಅಲೆಕ್ಕಾಡಿ ಸ್ವಾಗತಿಸಿದರು. ಬಾತಿಷ ಬಡಕೋಡಿ ವಂದಿಸಿದರು.

LEAVE A REPLY

Please enter your comment!
Please enter your name here