- ಗೌರವಾಧ್ಯಕ್ಷ: ರಾಧಾಕೃಷ್ಣ ಕೋಲ್ಪೆ, ಅಧ್ಯಕ್ಷ: ತು.ಚಂದ್ರಶೇಖರ, ಪ್ರ.ಕಾರ್ಯದರ್ಶಿ: ಶಿವಪ್ರಸಾದ್ ರೈ
ಕಡಬ: ಭಾರತೀಯ ಮಜ್ದೂರು ಸಂಘ ಕಡಬ ತಾಲೂಕು ಘಟಕವನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ರಾಧಾಕೃಷ್ಣ ಕೋಲ್ಪೆ, ಅಧ್ಯಕ್ಷರಾಗಿ ತು.ಚಂದ್ರಶೇಖರ ಮರ್ದಾಳ, ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ರಸಾದ್ ರೈ ಮೈಲೇರಿ, ಉಪಾಧ್ಯಕ್ಷರಾಗಿ ದೇಜಪ್ಪ ಸಂಪಡ್ಕ ಮತ್ತು ಕೇಶವ ಕೊಣಾಲು ನೆಲ್ಯಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಉದಯ ಪೂವಳ, ಖಜಾಂಚಿಯಾಗಿ ಜನಾರ್ಧನ ಗೌಡ ಆರಿಗ ಬಲ್ಯ ಅವರು ಆಯ್ಕೆಯಾಗಿದ್ದಾರೆ.
ರಾಜ್ಯ ಕಾರ್ಯದರ್ಶಿಯಾಗಿ ಜಯರಾಜ್ ಸಾಲ್ಯಾನ್ ಬೆಳ್ತಂಗಡಿ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಕಡಬ ಪ್ರಭಾರಿ ಕುಮಾರನಾಥ ಶೆಟ್ಟಿ, ಮಾಧವ ಕೋಲ್ಪೆ, ಶ್ರೀಕೃಷ್ಣ ಎಂ. ಆರ್. ಅಜಿತ್ ರೈ ಆರ್ತಿಲ, ಮನೋಜ್ ಮರ್ದಾಳ, ಪ್ರಮೋದ್ ರೈ ನಂದುಗುರಿ ಉಪಸ್ಥಿತರಿದ್ದರು.