ಪೆರ್ನೆ: ಹಿಟ್ ಆಂಡ್ ರನ್ – ಸ್ಕೂಟರ್ ಸವಾರನಿಗೆ ಗಾಯ

0

ಪುತ್ತೂರು:ಸ್ಕೂಟರ್‌ವೊಂದಕ್ಕೆ ಕಾರೊಂದು ಡಿಕ್ಕಿಯಾಗಿ ಪರಾರಿಯಾದ ಘಟನೆ ಜೂ.24ರಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪೆರ್ನೆಯಲ್ಲಿ ನಡೆದಿದೆ.

ಸ್ಕೂಟರ್ ಸವಾರ ವಿಟ್ಲ ಕಸಬ ನಿವಾಸಿ ರಾಮಣ್ಣ ಮೂಲ್ಯ ಅವರು ಗಾಯಗೊಂಡಿದ್ದಾರೆ. ಅವರು ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕಾರೊಂದು ಸ್ಕೂಟರ್‌ಗೆ ಡಿಕ್ಕಿಯಾಗಿ ಪರಾರಿಯಾಗಿತ್ತು.ಬಳಿಕ ಪೊಲೀಸರು ಅಪಘಾತ ಎಸಗಿದ ಕಾರನ್ನು ಪತ್ತೆ ಮಾಡಿದ್ದಾರೆ. ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here