ಪುತ್ತೂರು: ಹಡಿಲು ಗದ್ದೆಯಲ್ಲಿ ಭತ್ತದ ಕೃಷಿ ಮಾಡುವ ದೇವಸ್ಥಾನ ಹಾಗೂ ಶ್ರದ್ಧಾ ಕೇಂದ್ರಗಳಿಗೆ ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಳದ ವತಿಯಿಂದ ಕಳೆದ ವರ್ಷದಂತೆ ಈ ವರ್ಷವೂ ಬಿತ್ತನೆ ಬೀಜವನ್ನು ನೀಡಲಾಗುತ್ತದೆ.
ಅಪೇಕ್ಷಿತರು ತಕ್ಷಣ ಕಚೇರಿಯನ್ನು ಸಂಪರ್ಕಿಸಿ ಬೀಜವನ್ನು ಪಡೆದುಕೊಳ್ಳಬೇಕು. ಬೀಜಗಳನ್ನು ಪಡೆಯುವ ಮುಂದೆ ತಮಗೆ ಬೇಕಾದ ಬೀಜದ ಪ್ರಮಾಣವನ್ನು ಅರ್ಜಿಯ ಮೂಲಕ ನಮೂದಿಸುವಂತೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ 7892748196 ಅನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.