ಸವಣೂರು ; ಸವಣೂರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕ್ರಾಂತಿಕಾರಿ ಬದಲಾವಣೆಗಳ ಮೂಲಕ ಶೈಕ್ಷಣಿಕ ಕ್ಷೇತ್ರದ ಅಪ್ರತಿಮ ಸಾಧಕರಾಗಿ ಮೂಡಿಬಂದ ನಿವೃತ್ತ ಪ್ರಾಂಶುಪಾಲ ಬಿ.ವಿ.ಸೂರ್ಯನಾರಾಯಣ ಅವರಿಗೆ ಅಭಿನಂದನಾ ಕಾರ್ಯಕ್ರಮ -ಸೂರ್ಯತೇಜ ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿಯ ಶಿಕ್ಷಣ ಪ್ರೇಮಿಗಳ ವತಿಯಿಂದ ಜೂ.27ರಂದು ಸಂಜೆ 3.30ರಿಂದ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾ.ಪಂ.ಅಧ್ಯಕ್ಷೆ ಕೆ.ರಾಜೀವಿ ವಿ.ಶೆಟ್ಟಿ ವಹಿಸುವರು.ನಿವೃತ ಪ್ರಾಂಶುಪಾಲ ಕೃಷ್ಣ ಭಟ್ ಆವರು ಬಿ.ವಿ.ಸೂರ್ಯನಾರಾಯಣ ಅವರನ್ನು ಸಮ್ಮಾನಿಸುವರು.ಅತಿಥಿಗಳಾಗಿ ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಚಾರ್ಯೆ ಪದ್ಮಾವತಿ ಎನ್.ಪಿ. ಪಾಲ್ಗೊಳ್ಳುವರು ಎಂದು ಸೂರ್ಯ ತೇಜ ಅಭಿನಂದನಾ ಸಮಿತಿಯ ಪ್ರಕಟಣೆ ತಿಳಿಸಿದೆ.