ರಾಷ್ಟ್ರೀಯ   ಲೋಕ ಅದಾಲತ್ ಪುತ್ತೂರಿನಲ್ಲಿ 514 ಪ್ರಕರಣ ಇತ್ಯರ್ಥ

0

  • ರೂ. 1.28 ಕೋಟಿ ಪರಿಹಾರ ಮೊತ್ತ ಫಲಾನುಭವಿಗಳಿಗೆ ವಿತರಣೆಗೆ ಆದೇಶ

ಪುತ್ತೂರು: ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಜೂ.25ರಂದು ಆಯೋಜಿಸಿದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪುತ್ತೂರಿನಲ್ಲಿ ಒಟ್ಟು 1096 ಪ್ರಕರಣಗಳ ಪೈಕಿ 514 ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೂ. 1,28,72,100 ಪರಿಹಾರ ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲು ಆದೇಶಿಸಲಾಗಿದೆ.

ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.

5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್. ಓಂಕಾರಪ್ಪ ಅವರ ನ್ಯಾಯಾಲಯದಲ್ಲಿ 131 ಪ್ರಕರಣಗಳಲ್ಲಿ 13 ಪ್ರಕರಣ ಇತ್ಯರ್ಥಗೊಂಡಿದೆ. ರೂ. 40.62 ಲಕ್ಷ ಸೆಟ್ಲೆಮೆಂಟ್ ಆಗಿದೆ. ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನಾಯಿಕ ದಂಡಾಧಿಕಾರಿ ಗೌಡ ಆರ್.ಪಿ. ಅವರ ನ್ಯಾಯಾಲಯದಲ್ಲಿ 163 ಪ್ರಕರಣಗಳಲ್ಲಿ 78 ಪ್ರಕರಣ ಇತ್ಯರ್ಥಗೊಂಡಿದೆ. ರೂ.43,91,100 ಸೆಟ್ಲ್ಮೆಂಟ್ ಆಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 251 ಪ್ರಕರಣಗಳಲ್ಲಿ 90 ಪ್ರಕರಣಗಳು ಇತ್ಯರ್ಥಗೊಂಡಿದೆ. ರೂ. 28,31,200 ಸೆಟ್ಲೆಮೆಂಟ್ ಆಗಿದೆ. ಪ್ರಧಾನ ಸಿವಿಲ್ ನ್ಯಾಯಧೀಶರ ನ್ಯಾಯಾಲಯ ಜೆಎಮ್‌ಎಫ್‌ಸಿಯಲ್ಲಿ 111 ಪ್ರಕರಣಗಳಿದ್ದು, 80 ಪ್ರಕರಣಗಳು ಇತ್ಯರ್ಥಗೊಂಡಿವೆ. ರೂ. 12,66,002 ಸೆಟ್ಲೆಮೆಂಟ್ ಆಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 288 ಪ್ರಕರಗಳಿದ್ದು, 163 ಪ್ರಕರಣಗಳು ಇತ್ಯರ್ಥಗೊಂಡಿವೆ. ರೂ. 2,47,898 ಸೆಟ್ಲ್ಮೆಂಟ್ ಆಗಿದೆ. 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ 157 ಪ್ರಕಣಗಳಲ್ಲಿ 90 ಪ್ರಕರಣ ಇತ್ಯರ್ಥಗೊಂಡಿವೆ. ರೂ. 65,900 ಸೆಟ್ಲ್ಮೆಂಟ್ ಆಗಿದ್ದು 6 ನ್ಯಾಯಾಲಯಗಳಲ್ಲಿ ಒಟ್ಟು 514 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ. 1,28,72,000 ಮೊತ್ತವನ್ನು ಫಲಾನುಭವಿಗಳಿಗೆ ವಿತರಿಸಲು ಆದೇಶಿಸಲಾಗಿದೆ. ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರಾಗಿ ನ್ಯಾಯವಾದಿಗಳಾದ ನಾರಾಯಣ ರೈ ಮತ್ತು ಉಲ್ಲಾಸ್ ಹೆಚ್ ಅವರು ಸಹಕರಿಸಿದರು.

6 ನ್ಯಾಯಾಲಯಗಳಿದ್ದರೂ ಇಬ್ಬರೇ ನ್ಯಾಯಾಧೀಶರು:

ಪುತ್ತೂರಿನಲ್ಲಿ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೇರಿ ಒಟ್ಟು 6 ನ್ಯಾಯಾಲಯಗಳಿದ್ದರೂ ಇಬ್ಬರೇ ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾರೆ. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಓಂಕಾರಪ್ಪ ಮತ್ತು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಗೌಡ ಆರ್.ಪಿ. ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶ ಗೌಡ ಆರ್.ಪಿ.ಅವರು ತನ್ನ ನ್ಯಾಯಾಲಯದಲ್ಲಿ 78 ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ 90 ಪ್ರಕರಣಗಳನ್ನು ಸೇರಿಸಿ ಒಟ್ಟು 168 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. ಅದೇ ರೀತಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯ ಜೆಎಮ್‌ಎಫ್‌ಸಿ, ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಪ್ರಭಾರ ನ್ಯಾಯಾಧೀಶರಾದ ಬಂಟ್ವಾಳ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ ಎಲ್ಲಪ್ಪ ಅವರು 333 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ.

LEAVE A REPLY

Please enter your comment!
Please enter your name here