ಪುತ್ತೂರು: ಭಾರತೀಯ ಜನತಾ ಪಾರ್ಟಿ ಕೆದಂಬಾಡಿ ಶಕ್ತಿಕೇಂದ್ರದ ಸಭೆಯು ಜೂ.26ರಂದು ಸೂರ್ಯ ಪ್ರಸನ್ನ ರೈ ಎಂಡೆಸಾಗುರವರ ಮನೆಯಲ್ಲಿ ನಡೆಯಿತು. ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸವಲತ್ತುಗಳ ಬಗ್ಗೆ ಮತ್ತು ಗ್ರಾಮದ ಜನರಿಗೆ ಸವಲತ್ತುಗಳು ದೊರಕುತ್ತಿದ್ದು ಈ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಬೇಕೆಂದು ತಿಳಿಸಿದರು. ಜಿಲ್ಲಾ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರತನ್ ರೈ, ಕುಂಬ್ರ ಶಕ್ತಿಕೇಂದ್ರದ ಪ್ರಮುಖರಾದ ನಾರಾಯಣ ಪೂಜಾರಿ ಕುರಿಕಾರ, ಪಂಚಾಯತ್ ಉಪಾಧ್ಯಕ್ಷ ಭಾಸ್ಕರ್ ಮಿತ್ರಂಪಾಡಿ, ಶ್ರೀ ದೇವತಾ ಗಿರಿ ಭಜನಾಮಂದಿರ ತಿಂಗಳಾಡಿ ಇದರ ಅಧ್ಯಕ್ಷ ಜಯರಾಮ ರೈಮಿತ್ರಂಪಾಡಿ, ಪಂಚಾಯತ್ ಸದಸ್ಯರಾದ ವಿಠ್ಠಲ ರೈ ಮಿತ್ತೋಡಿ , ಕೃಷ್ಣಕುಮಾರ್ ಇದ್ಯಪೆ, ರೇವತಿ ಎಂ, ಸುಜಾತ ಮುಳಿಗದ್ದೆ, ಜಯಲಕ್ಷ್ಮಿ ಬಲ್ಲಾಳ್, ರೈತ ಮೋರ್ಚಾ ಸದಸ್ಯರಾದ ಮಹಾಬಲ ರೈ ಕುಕ್ಕುಂಜೋಡು ಬೂತಿನ ಅಧ್ಯಕ್ಷ ಸೀತಾರಾಮ ಗೌಡ ಇದ್ಯಪೆ ಮತ್ತು ಕೊರಗಪ್ಪ ಪೂಜಾರಿ ತಿಂಗಳಾಡಿ, ಗಣೇಶ ಮಿತ್ರಂಪಾಡಿ, ಎಟಿ ನಾರಾಯಣ್ ತಿಂಗಳಾಡಿ, ಮೋಹನ್ ರೈ ಎಂಡೆಸಾಗು, ಚಂದ್ರ ಇದ್ಪಾಡಿ, ವಿದಿಪ ಕುಮಾರ್ ಸಭೆಯಲ್ಲಿ ಉಪಸ್ಥಿತರಿದ್ದರು.