ಪುತ್ತೂರು : ಕಾರ್ಪಾಡಿ ಶ್ರೀಸುಬ್ರಹ್ಮಣ್ಯ ದೇವರಿಗೆ ಪೂವಪ್ಪ ಗೌಡ ಕಲ್ಲರ್ಪೆರವರ ಸೇವಾರ್ಥವಾಗಿ ಪವಮಾನಾಭಿಷೇಕ ಸೇವೆ ನಡೆಯಿತು. ಅರ್ಚಕ ಸಂದೀಪ ಕಾರಂತರು ಪೂಜೆ ನೆರವೇರಿಸಿದರು. ಸುಬ್ರಹ್ಮಣ್ಯ ದೇವರಿಗೆ ಹೆಚ್ಚು ಪ್ರಶಸ್ತವಾದ ಸೇವೆ ಇದಾಗಿದ್ದು ಪವಮಾನಾಭಿಷೇಕ ಸೇವೆ ಮಾಡಿಸಿದಲ್ಲಿ ಅತೀ ಉತ್ತಮವೆಂದೂ, ಸಾನಿಧ್ಯ ವೃದ್ಧಿ, ಭಕ್ತರ ಸಕಲ ಅಭೀಷ್ಡಗಳು ನೆರವೇರುವುದಾಗಿ ಕಳೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲೂ ತಿಳಿಸಲಾಗಿತ್ತು.