ಜೂ.30: ನೆಲ್ಯಾಡಿ ಪ್ರಾ.ಕೃ.ಪ.ಸಹಕಾರ ಸಂಘದ ಸಿಬ್ಬಂದಿ ಪದ್ಮನಾಭ ಶೆಟ್ಟಿ ನಿವೃತ್ತಿ

0

ನೆಲ್ಯಾಡಿ: ಕಳೆದ 40 ವರ್ಷಗಳಿಂದ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮನಾಭ ಶೆಟ್ಟಿ ಕೆ.,ರವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ.


1-9-1982ರಂದು ಸಂಘದ ನೆಲ್ಯಾಡಿಯ ಕೇಂದ್ರ ಕಚೇರಿಯಲ್ಲಿ ಸಿಬ್ಬಂದಿಯಾಗಿ ಸೇರ್ಪಡೆಗೊಂಡ ಪದ್ಮನಾಭ ಶೆಟ್ಟಿಯವರು ಆ ಬಳಿಕ ಸಂಘದ ಶಿರಾಡಿ, ಗೋಳಿತ್ತೊಟ್ಟು ಶಾಖೆಗಳಲ್ಲಿ ಹಾಗೂ ಇಚ್ಲಂಪಾಡಿ ಪಡಿತರ ವಿತರಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ಕೆಲ ವರ್ಷಗಳಿಂದ ಗೋಳಿತ್ತೊಟ್ಟು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪದ್ಮನಾಭ ಶೆಟ್ಟಿಯವರು ಜೂ.30ರಂದು ನಿವೃತ್ತಿಯಾಗಲಿದ್ದಾರೆ. ಪದ್ಮನಾಭ ಶೆಟ್ಟಿಯವರು ಕೃಷಿ ಹಾಗೂ ಹೈನುಗಾರಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಕೊಣಾಲು ಗ್ರಾಮದ ಮರಂದೆ ’ಭ್ರಾಮರಿ’ ನಿಲಯ ನಿವಾಸಿಯಾಗಿರುವ ಪದ್ಮನಾಭ ಶೆಟ್ಟಿಯವರು ಆಲಂತಾಯ ಗ್ರಾಮದ ಕೋಣಿಬೈಲು ನಿವಾಸಿ ಕೊರಗಪ್ಪ ಶೆಟ್ಟಿ ಹಾಗೂ ಕಮಲ ದಂಪತಿ ಪುತ್ರ. ಪದ್ಮನಾಭ ಶೆಟ್ಟಿಯವರ ಪತ್ನಿ ಹೇಮ ಪಿ.ಶೆಟ್ಟಿಯವರು ಗೃಹಿಣಿಯಾಗಿದ್ದು ಹಿರಿಯ ಪುತ್ರ ಹರ್ಷಿತ್ ಕೆ.ಪಿ.ಶೆಟ್ಟಿ ಅವರು ಭಾರತೀಯ ವಾಯುಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನೋರ್ವ ಪುತ್ರ ರಕ್ಷಿತ್ ಕೆ.ಪಿ.ಶೆಟ್ಟಿ ವ್ಯಾಸಂಗ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here