ಪುತ್ತೂರು:ಐದು ದಿನಗಳ ಹಿಂದೆ ಕಾರಿನಲ್ಲಿ ಸಂಚರಿಸುತ್ತಿದ್ದ ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷರ ಸಹಿತ ಮೂವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ. ಜೂ.24ರ ರಾತ್ರಿ ಪೆರಾಬೆ ಗ್ರಾ.ಪಂ.ಅಧ್ಯಕ್ಷ ಮೋಹನ್ದಾಸ್ ರೈ ಸಹಿತ ಮೂವರು ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಏಳು ಮಂದಿಯ ತಂಡವೊಂದು ಅವರನ್ನು ಕಾರಿನಿಂದ ಹೊರಕ್ಕೆಳೆದು ಕತ್ತಿಯಿಂದ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿದೆ.ಈ ಘಟನೆಗೆ ಸಂಬಂಧಿಸಿದಂತೆ ಪೆರಾಬೆ ಆದಂ ಎಂಬವರ ಮಗ ಜುಬೈರ್, ಕೋಚಕಟ್ಟೆ ಅಬ್ದುಲ್ ಖಾದರ್ ಎಂಬವರ ಮಗ ಮೊದು ಕುಂಞಿ ಎಂಬವರನ್ನು ಪೊಲೀಸರು ಬಂಧಿಸಿದ್ದರು.ಪ್ರಕರಣದ ಇತರ ಆರೋಪಿಗಳಾದ, ಕುಂತೂರು ಎರ್ಮಾಲ ಅಬ್ದುಲ್ಲ ಎಂಬವರ ಮಗ ಕೆ.ರಾಝಿಕ್(29ವ.),ಬೇಳ್ಪಾಡಿ ಆದಂ ಎಂಬವರ ಮಗ ಝುನೈದ್(23ವ.)ಹಾಗೂ ಕೋಚಕಟ್ಟೆ ಮೊಹಮ್ಮದ್ ಶಫಿ ಎಂಬವರ ಮಗ ಕೆ.ಎಸ್.ಅಬ್ದುಲ್ ರಹಿಮಾನ್ ಯಾನೆ ಅಮಾನ್(20ವ.)ಎಂಬವರು ನ್ಯಾಯಾಲಯಕ್ಕೆ ಶರಣಾಗಿದ್ದಾರೆ.ನ್ಯಾಯಾಲಯವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರ ವಕೀಲರಾದ ಸಂತೋಷ್ ಕುಮಾರ್ ಉಪ್ಪಿನಂಗಡಿ,ಕು.ಹರ್ಷಿತಾ, ಕು.ನಮಿತಾ ವಾದಿಸಿದ್ದರು.