ಪುತ್ತೂರು : ಕೆಎಸ್ಆರ್ಟಿಸಿ ಸುಳ್ಯ ಡಿಪೋದ ಹಿರಿಯ ಚಾಲಕ ಶೀನ ನಾಯ್ಕ ರವರು ಜೂ.30ರಂದು ಕರ್ತವ್ಯದಿಂದ ನಿವೃತ್ತಿ ಹೊಂದಿದ್ದಾರೆ. 1993ರಲ್ಲಿ ಕೆಎಸ್ಆರ್ಟಿಸಿ ಮಡಿಕೇರಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯಕ್ಕೆ ಸೇರಿದ್ದ ಇವರು ಬಳಿಕ ಮಂಗಳೂರು ಡಿಪೋದಲ್ಲಿ ಲೈನ್ ಚೆಕ್ಕಿಂಗ್ ವಾಹನದಲ್ಲಿ ಚಾಲಕನಾಗಿ, ಪುತ್ತೂರು ಡಿಪೋ, ಸುಳ್ಯ ಡಿಪೋದಲ್ಲಿ ಬಸ್ ಚಾಲಕನಾಗಿ, ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಅಪಘಾತ ರಹಿತ ಚಾಲನೆಗೆ ಇವರು 2019 ರಲ್ಲಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಕಡಬ ತಾಲೂಕಿನ ಬೆದ್ರಾಜೆ ನಿವಾಸಿ ತುಂಗ ನಾಯ್ಕ ಮತ್ತು ಕಾವೇರಿ ದಂಪತಿ ಪುತ್ರರಾದ ಇವರು ಪತ್ನಿ ಕೆ.ಬಿ.ಚಂದ್ರಾವತಿ, ಪುತ್ರಿ ಸ್ವಸ್ತಿಕಾ ಬಿ.ಎಸ್., ರಿತಿಕಾ ಬಿ.ಎಸ್., ಅಳಿಯ ನೆಲ್ಯಾಡಿ ಭಾರತ್ ಅಟೋಕಾರ್ಸ್ ಉದ್ಯೋಗಿ ಆನಂದ ನಾಯ್ಕ, ಮೊಮ್ಮಗಳು ಮೊನಿಷ್ಕಾರವರನ್ನು ಹೊಂದಿದ್ದಾರೆ.
ಸನ್ಮಾನ : ನಿವೃತ್ತಿಗೊಂಡ ಶೀನ ನಾಯ್ಕರವರನ್ನು ಕೆಎಸ್ಆರ್ಟಿಸಿ ಸುಳ್ಯ ಡಿಪೋದ ವತಿಯಿಂದ ಜೂ.30ರಂದು ಸನ್ಮಾನಿಸಿ ಬೀಳ್ಕೊಡಲಾಯಿತು. ಡಿಪೋ ಮ್ಯಾನೇಜರ್ ವಸಂತ ನಾಯ್ಕ, ಸೀನಿಯರ್ ಮೆಕ್ಯಾನಿಕ್ ಮೋನಪ್ಪ ಗೌಡ, ಟ್ರಾಫಿಕ್ ವಿಭಾಗದ ಜಗನ್ನಾಥ್, ಸೂಪರ್ವೈಸರ್ ಹರೀಶ್ ನಾಯ್ಕ, ಚಾಲಕರಾದ ವಸಂತ, ಕುಶಾಲಪ್ಪ ಗೌಡ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.