ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ.ರವರಿಗೆ ಪುತ್ತೂರು ತಾಲೂಕು ದೈ.ಶಿ  ಶಿಕ್ಷಕರ ಸಂಘದಿಂದ ಬೀಳ್ಕೊಡುಗೆ 

0

ಪುತ್ತೂರು: ವರ್ಗಾವಣೆಗೊಂಡಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ ರವರಿಗೆ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ವತಿಯಿಂದ ಜೂ.30ರಂದು ಗೌರವಿಸಿ ಬೀಳ್ಕೊಡಲಾಯಿತು. ಸಂಘದ ಅಧ್ಯಕ್ಷ ಮೋನಪ್ಪ ಎಂ, ಕಾರ್ಯದರ್ಶಿ ಶ್ರೀಲತಾ ಎ, ನಿವೃತ್ತ ದೈ.ಶಿ   ಶಿಕ್ಷಕ ಶಿವರಾಮ ಏನೇಕಲ್, ಸಂಘದ ಕೋಶಾಧಿಕಾರಿ ಮೋಹನ್, ಪದಾಧಿಕಾರಿಗಳಾದ ಪ್ರವೀಣ ರೈ, ವನಿತಾ ಬಿ, ಸುಧಾಕರ್ ರೈ, ಗೀತಾ ಮಣಿ, ವಿಜಯ ಪ್ರಭು, ಪ್ರವಿತ, ಚಂದ್ರಕಲಾ, ವಿಮಲಕ ಕೆ, ವಸಂತಿ ಕೆ, ಸಂತೋಷ್ ನಾಯಕ್, ನರೇಶ್ ಲೋಬೋ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನವೀನ್ ಉಪಸ್ಥಿತರಿದ್ದು ಶುಭ ಹಾರೈಸಿದರು.

LEAVE A REPLY

Please enter your comment!
Please enter your name here