ಪುತ್ತೂರು : ಭಾರತ ಸರಕಾರದಿಂದ ಪ್ರವರ್ತಿತ ನ್ಯಾಷನಲ್ ಡೆವಲಪ್ ಮೆಂಟ್ ಏಜನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ 2022-23ನೇ ಸಾಲಿನ ಒಂದು ವರ್ಷದ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ತರಗತಿ ಜು.1ರಂದು ಆರಂಭಗೊಂಡಿತು. ಭಾರತ್ ಸೇವಕ್ ಸಮಾಜದ ಜಿಲ್ಲಾ ಸಂಯೋಜಕ ರಘುಕುಮಾರ್ ಪಿ. ತರಗತಿಗೆ ಚಾಲನೆ ನೀಡಿ ಶುಭಹಾರೈಸಿದರು. ಬೆಳ್ಳಾರೆ ಕೆ.ಪಿ.ಎಸ್ನ ಗೌರವ ಶಿಕ್ಷಕಿ ಲಾವಣ್ಯ, ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಉಪನ್ಯಾಸಕಿ ಗೀತಾ ಬಾಲಚಂದ್ರ, ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು ಉಪಸ್ಥಿತರಿದ್ದರು.
ಮಗುವಿಗೆ ಗುರುತಿಸಿ ಕಲಿಯಲು ಅವಕಾಶ ಮಾಡಿಕೊಡುವ ಕಲಿಕಾ ಪದ್ದತಿಯಾದ ಮೊಂಟೆಸ್ಸರಿ ವಿಧಾನದ ವಿವಿಧ ಅಧ್ಯಯನ ಮಾದರಿಗಳು ತಯಾರಿಸುವುದು ಹಾಗೂ ಅವುಗಳನ್ನು ಉಪಯೋಗಿಸಿಕೊಂಡು ಮಗುವಿಗೆ ಪರಿಣಾಮಕಾರಿ ಯಾಗಿ ಬೋಧಿಸುವ ವಿಧಾನಗಳನ್ನು ಇಲ್ಲಿನ ತರಬೇತಿಯಲ್ಲಿ ಕಲಿಸಿಕೊಡಲಾಗುತ್ತಿದೆ. ತರಬೇತಿಯ ಅವಧಿಯಲ್ಲಿ ವಾರ್ಷಿಕ ವಿಶೇಷ ಶಿಬಿರ, ಅಧ್ಯಯನ ಪ್ರವಾಸ, ಪ್ರಾಯೋಗಿಕ ತರಗತಿ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಉಚಿತ ಇಂಗ್ಲೀಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತಿದ್ದು, ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು ಅಥವಾ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಈ ತರಬೇತಿಗೆ ಸೇರಬಹುದಾಗಿದ್ದು, 2022-23ನೇ ಸಾಲಿನಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಪಡೆಯಲಿಚ್ಚಿಸುವ ಆಸಕ್ತರು ಬೆಳ್ಳಾರೆ ಮತ್ತು ಸುಳ್ಯ ದಲ್ಲಿರುವ ಜ್ಞಾನದೀಪ ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ