ಪುತ್ತೂರು:ಥಲೇಸ್ಸೇಮಿಯಾ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕು ಒಕ್ಕೆತ್ತೂರು ನಿವಾಸಿ ದಿಗಂತ್ ಗೆ ಕಲಿಯುಗ ಸೇವಾ ಸಮಿತಿ ಚಿಕ್ಕಮುಡ್ನೂರು ವತಿಯಿಂದ ಸಂಗ್ರಹಿಸಿದ ಹಾಗೂ ಟೈಲರ್ ಅಸೋಸಿಯೇಷನ್ ಪುತ್ತೂರು ತಾಲೂಕು ಅಧ್ಯಕ್ಷ ಜಯರಾಮ ಬಿ.ಎನ್ ಪೂಜಾರಿ, ಕಾರ್ಯದರ್ಶಿ ಉಮಾ .ಯು ನಾಯಕ್ ನೀಡಿದ ಸಹಾಯಧನವನ್ನು ಸುದ್ದಿ ಮೀಡಿಯಾ ಸೆಂಟರ್ ನಲ್ಲಿ ಜು.2ರಂದು ದಿಗಂತ್ ಹೆತ್ತವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುದ್ದಿ ಬಿಡುಗಡೆ ಹಾಗೂ ಸುದ್ದಿ ಚಾನೆಲ್ ಪುತ್ತೂರಿನ ಸಿ.ಇ.ಒ ಸೃಜನ್ ಊರುಬೈಲು, ಕಲಿಯುಗ ಸೇವಾ ಸಮಿತಿಯ ಸಂಪತ್ ಕುಮಾರ್ ಜೈನ್, ಟೈಲರ್ ಅಸೋಸಿಯೇಷನ್ ಪುತ್ತೂರಿನ ನಗರದ ಅಧ್ಯಕ್ಷ ಯಶೋಧರ ಜೈನ್, ಕೃಷ್ಣಪ್ಪ ಗೌಡ ಮೊಟ್ಟೆತ್ತಡ್ಕ, ಸಂತೋಷ್ ಕುಮಾರ್ ಆಚಾರ್ಯ, ಸುರೇಂದ್ರ ಪೂಜಾರಿ ಬೀರ್ನ ಹಿತ್ಲು, ಸುದ್ದಿ ಪ್ರತಿನಿಧಿ ರಮೇಶ್ ಕೆಮ್ಮಾಯಿ, ಸುದ್ದಿ ಚಾನೆಲ್ ಕ್ಯಾಮರಾಮ್ಯಾನ್ ಸಮದ್ ಕುರಿಯ ಉಪಸ್ಥಿತರಿದ್ದರು.
ಸುದ್ದಿ ಚಾನೆಲ್ ನಿರೂಪಕ ಶಿವಪ್ರಸಾದ್.ರೈ ಕಾರ್ಯಕ್ರಮ ನಿರೂಪಿಸಿದರು.