ಕೊಳ್ತಿಗೆ: ಬಿಜೆಪಿ ಯುವ ಮೋರ್ಚಾ ವತಿಯಿಂದ ಗೌರವಾರ್ಪಣೆ ಕಾರ್ಯಕ್ರಮ

0

ಪುತ್ತೂರು: ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲ, ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರ, ಬಿಜೆಪಿ ಯುವ ಮೋರ್ಚಾ ಕೊಳ್ತಿಗೆ ಶಕ್ತಿ ಕೇಂದ್ರ ಇದರ ವತಿಯಿಂದ 2021-22ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶ್ರೀ ಷಣ್ಮುಖದೇವ ಪ್ರೌಢಶಾಲೆ ಪೆರ್ಲಂಪಾಡಿಯಲ್ಲಿ ಅತಿ ಹೆಚ್ಚು ಅಂಕ (613) ಗಳಿಸಿದ ವಿದ್ಯಾರ್ಥಿನಿ ಕು| ಮಾನಸ ಮಾಲೆತ್ತೋಡಿ ಇವರಿಗೆ ಗೌರವಾರ್ಪಣೆ ಕಾರ್ಯಕ್ರಮವು ಜು.02 ರಂದು ವಿದ್ಯಾರ್ಥಿನಿಯ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕೊಳ್ತಿಗೆ ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕರಾದ ಸತೀಶ್ ಪಾಂಬಾರು, ಕೊಳ್ತಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ನಾಗವೇಣಿ ಕೆ, ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಪ್ರಭಾರಿ ಯತೀಂದ್ರ ಗೌಡ ಕೊಚ್ಚಿ, ಮಾಲೆತ್ತೋಡಿ ಶಾಲಾ ಮುಖ್ಯ ಗುರುಗಳಾದ ತಿಮ್ಮಪ್ಪ ಕೊಡ್ಲಾಡಿ, ಬಿಜೆಪಿ ಯುವ ಮೋರ್ಚಾ ಪುತ್ತೂರು ಗ್ರಾಮಾಂತರ ಮಂಡಲದ ಉಪಾಧ್ಯಕ್ಷರಾದ ಶೋಭಿತ್ ಕೆಮ್ಮಾರ, ಪೆರ್ಲಂಪಾಡಿ ಪೂರ್ವ ಬಿಜೆಪಿ ಬೂತ್ ಅಧ್ಯಕ್ಷರಾದ ಶ್ರೀನಿವಾಸ ಕೊಂರ್ಬಡ್ಕ ದೊಡ್ಡಮನೆ, ಯುವ ಮೋರ್ಚಾ ಪ್ರಮುಖರಾದ ಭವಿತ್ ಮಾಲೆತ್ತೋಡಿ, ಜನಾರ್ದನ ಮಾಲೆತ್ತೋಡಿ, ಯಶವಂತ್ ದುಗ್ಗಳ, ದಿನೇಶ್ ಕೆರೆಮೂಲೆ ಹಾಗೂ ಇತರ ಯುವ ಮೋರ್ಚಾ ಸದಸ್ಯರು ಪಾಲ್ಗೊಂಡಿದ್ದರು.

ಬಿಜೆಪಿ ಯುವ ಮೋರ್ಚಾ ನರಿಮೊಗರು ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ದುಗ್ಗಳ ಸ್ವಾಗತಿಸಿ, ಪೆರ್ಲಂಪಾಡಿ ಪಶ್ಚಿಮ ಬಿಜೆಪಿ ಬೂತ್ ಕಾರ್ಯದರ್ಶಿ ಅಶೋಕ್ ಒರ್ಕೊಂಬು ವಂದಿಸಿದರು.

LEAVE A REPLY

Please enter your comment!
Please enter your name here