ಪತ್ರಕರ್ತ ಎಸ್.ಜಿ. ಕುರ್ಯರಿಗೆ ಸನ್ಮಾನ

0

ಪುತ್ತೂರು: ರೋಟರಿ‌ ಉಡುಪಿ ವತಿಯಿಂದ ಕಡಿಯಾಳಿಯ ಶ್ರೀ‌ ಮಹಿಷಮರ್ದಿನಿ ರೋಟರಿ ಸ್ಕೌಟ್‌ ಸಭಾ ಭವನದಲ್ಲಿ ನಡೆದ ಸೇವಾ ಯೋಜನೆಗಳ‌ ಉದ್ಘಾಟನಾ ಕಾರ್ಯಕ್ರಮದಲ್ಲಿ ವೈದ್ಯರ ದಿನ, ಪತ್ರಿಕಾ‌ ದಿನ ಹಾಗೂ ಲೆಕ್ಕ ಪರಿಶೋಧಕರ ದಿನದ ಅಂಗವಾಗಿ ಡಾ.ಜಯಂತ್‌ ಕುಮಾರ್ , ವಿಜಯ ಕರ್ನಾಟಕ ಉಡುಪಿ ಜಿಲ್ಲಾ‌ ಪ್ರಧಾನ ವರದಿಗಾರರಾಗಿರುವ ಪುತ್ತೂರಿನ ಸುಬ್ರಹ್ಮಣ್ಯ ಗಣಪತಿ‌ ಭಟ್ (ಎಸ್.ಜಿ.ಕುರ್ಯ)ಹಾಗೂ ಸಿಎ ಅನಂತ‌ ನಾರಾಯಣ ಪೈ ಅವರನ್ನು ಸನ್ಮಾನಿಸಲಾಯಿತು.

ರೋಟರಿ ಜಿಲ್ಲೆ 3182 ಗವರ್ನರ್‌ ಡಾ.ಎಚ್.ಜೆ.ಗೌರಿ‌ ಕಾರ್ಯಕ್ರಮ ಉದ್ಘಾಟಿಸಿ ಸನ್ಮಾನ ನೆರವೇರಿಸಿದರು. ರೋಟರಿ ವಲಯ ೪ರ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ, ವಲಯ ತರಬೇತುದಾರ ಡಾ.ಕೆ.ಸುರೇಶ್ ಶೆಣೈ, ವಲಯ 4ರ ಸೇನಾನಿ ರಾಜೇಶ್ ಡಿ.ಪಾಲನ್, ರೋಟರಿ ಉಡುಪಿ ನಿಕಟಪೂರ್ವ ಅಧ್ಯಕ್ಷ ಹೇಮಂತ್ ಯು.ಕಾಂತ್ ಉಪಸ್ಥಿತರಿದ್ದರು.‌

ಸನ್ಮಾನಿತರನ್ನು ಸೀತಾರಾಮ ತಂತ್ರಿ, ಜೆ.ಗೋಪಾಲಕೃಷ್ಣ ಪ್ರಭು ಮತ್ತು ಅನಂತರಾಮ ಬಲ್ಲಾಳ್ ಪರಿಚಯಿಸಿದರು. ವನಿತಾ ಉಪಾಧ್ಯಾಯ‌ ಪ್ರಾರ್ಥಿಸಿದರು. ರೋಟರಿ ಉಡುಪಿ ಅಧ್ಯಕ್ಷ ಸುಬ್ರಹ್ಮಣ್ಯ ಕಾರಂತ ಸ್ವಾಗತಿಸಿದರು. ಚಂದ್ರಶೇಖರ್‌ ಅಡಿಗ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಉಡುಪಿ ಕಾರ್ಯದರ್ಶಿ ಗುರುರಾಜ್ ಭಟ್ ಟಿ.‌ವಂದಿಸಿದರು.

LEAVE A REPLY

Please enter your comment!
Please enter your name here