ಪುತ್ತೂರು: ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ಪುತ್ತೂರು ಇದರ ಸಾರಸ್ವತ ಯುವ ಸಂಘದ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಚ್ಚಿದಾನಂದ ಸೇವಾ ಸದನದ ಸಭಾಭವನದಲ್ಲಿ ನಡೆಯಿತು.
ಗೌರವಾಧ್ಯಕ್ಷರಾಗಿ ಸಂತೋಷ್ ವಾಗ್ಲೆ ಪುತ್ತೂರು, ಅಧ್ಯಕ್ಷರಾಗಿ ಸಿಂಧು ಪ್ರಭು ಏನಡ್ಕ, ಉಪಾಧ್ಯಕ್ಷರಾಗಿ ಗಣೇಶ್ ಮೊಂತಿಮಾರು, ಕಾರ್ಯದರ್ಶಿ ಸದಾಶಿವ ಮಂಗಲಪದವು, ಜತೆ ಕಾರ್ಯದರ್ಶಿಯಾಗಿ ಅಕ್ಷಯ್ ಸಂಪ್ಯ, ಸಂಘಟನಾ ಕಾರ್ಯದರ್ಶಿಯಾಗಿ ನಿತ್ಯಾನಂದ ಬೋರ್ಕರ್, ಜಯಶ್ರೀ ಪುತ್ತೂರು, ಪ್ರತಿನಿಧಿಯಾಗಿ ಅಭಿಷೇಕ್ ಬಜತ್ತನೆ, ವಲಯ ಪ್ರತಿನಿಧಿಗಳಾಗಿ ಶಶಿಕಿರಣ ಕಾಂಚನ, ಸಂದೀಪ್ ನಾಯಕ್ ಗೇರುಕಟ್ಟೆ, ಪ್ರವೀಣ್ ನಟ್ಟಿ, ನಿರಂಜನ ನಾಯಕ್, ಪ್ರಜ್ವಲ್ ಇರ್ದೆ ರವರನ್ನು ಆಯ್ಕೆ ಮಾಡಲಾಯಿತು. ಸಂಘದ ನಿರ್ದೇಶಕ ಬಾಲಕೃಷ್ಣ ನಾಯಕ್ ತೆಂಕಿಲ, ವಿಷ್ಣು ಪ್ರಭು ಕರಿಂಬಿಲ, ರಮೇಶ್ ಪ್ರಭು, ಪ್ರಧಾನ ಕಾರ್ಯದರ್ಶಿ ಮಲ್ಲಿಕಾ ಕುಕ್ಕಾಡಿಯವರು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ನಿರ್ದೇಶಕರಾದ ಹರಿಪ್ರಸಾದ ಪುಂಡಿಕಾಯಿ ಕಾರ್ಯಕ್ರಮ ನಿರ್ವಹಿಸಿದರು.