ಪುತ್ತೂರು: ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಹಾಗೂ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರಾಯೋಗಿಕ ಅನುಭವ ಮೂಡಿಸುವಲ್ಲಿ ಶಾಲಾ ಮಂತ್ರಿಮಂಡಲದ ಪಾತ್ರ ಮಹತ್ವದ್ದಾಗಿದೆ. ನೆಹರುನಗರದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ (CBSE) ಶಾಲೆಯಲ್ಲಿ 2022-23 ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಜೂ.29ರಂದು ರಚಿಸಲಾಯಿತು.
ಶಾಲಾ ನಾಯಕನಾಗಿ ಪಿ.ಶಶಾಂಕ್ ಭಟ್ ಹಾಗೂ ಉಪನಾಯಕಿಯಾಗಿ ಆಪ್ತ ಚಂದ್ರಮತಿ ಮುಳಿಯ ಚುನಾಯಿತರಾದರು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಯವರ ಮಾರ್ಗದರ್ಶನದೊಂದಿಗೆ ಸಹಶಿಕ್ಷಕಿಯರಾದ ವಿಶಾಲಾಕ್ಷಿ, ಸೌಮ್ಯಶ್ರೀ, ಆಶಾ ಶೆಟ್ಟಿ, ರುಚಿತಾ ರಾಮಕೃಷ್ಣರವರು ಚುನಾವಣಾ ಪ್ರಕ್ರಿಯಯನ್ನು ನಡೆಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಭಾವೀ ಪ್ರಜೆಗಳಿಗೆ ಚುನಾವಣಾ ಮಜಲುಗಳನ್ನು ತಿಳಿಹೇಳುವಲ್ಲಿ ಸಹಕರಿಸಿದರು.