ಕಾಣಿಯೂರು: ಬೆಳಂದೂರು ಗ್ರಾಮ ಪಂಚಾಯತ್ನಲ್ಲಿ ವಸತಿ ಯೋಜನೆಯಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳ ವಿಶೇಷ ಗ್ರಾಮ ಸಭೆ ಮತ್ತು ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ವಹಿಸಿದ್ದರು. ಗ್ರಾ.ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ಮೋಹನ ಅಗಳಿ, ಪ್ರವೀಣ್ ಕೆರೆನಾರ್, ಉಮೇಶ್ವರಿ ಅಗಳಿ, ಗೀತಾ ಕುವೇತ್ತೋಡಿ, ತಾರಾ ಅನ್ಯಾಡಿ, ರವಿಕುಮಾರ್ ಕೆಡೆಂಜಿ, ಜಯರಾಮ ಬೆಳಂದೂರು, ಹರಿಣಾಕ್ಷಿ ಬನಾರಿ, ಜಯಂತ ಅಬೀರ, ಗೌರಿ ಮಾದೋಡಿ, ವಿಠಲ ಗೌಡ ಅಗಳಿ, ಪಾರ್ವತಿ ಮರಕ್ಕಡ, ಗ್ರಾ.ಪಂ. ಪ್ರಭಾರ ಪಂಚಾಯತ್ ಅಧಿಕಾರಿ ನಾರಾಯಣ, ಸಿಬ್ಬಂದಿಗಳಾದ ಗೀತಾ, ಮಮತಾ, ಹರ್ಷಿತ್, ಸಂತೋಷ್ ಮತ್ತೀತರರು ಉಪಸ್ಥಿತರಿದ್ದರು.