ಉಪ್ಪಿನಂಗಡಿ: ಇಲ್ಲಿನ ಶುಕ್ರಿಯಾ ಗ್ರೂಪ್ ಆಫ್ ಕಂಪೆನಿಯ ಎ.ಕೆ. ಎಂಟರ್ಪ್ರೈಸಸ್ ಸಂಸ್ಥೆಯಿಂದ ಹೆಸರಾಂತ ಏಷ್ಯನ್ ಪೈಂಟ್ಸ್ ಮಳಿಗೆ ಜುಲೈ 4ರಂದು ಉಪ್ಪಿನಂಗಡಿ ಕೂಟೇಲು ಸೇತುವೆ ಬಳಿ ಶುಕ್ರಿಯಾ ಸೆಂಟರ್ನಲ್ಲಿ ರೋಯಲ್ ಮೆಕ್ಸಿಕೊ ಹೊಟೇಲ್ ಸನಿಹದಲ್ಲಿ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಕೆಮ್ಮಾರ ಸಂಶುಲ್ ಉಲೇಮಾ ಶರೀಅತ್ ಕಾಲೇಜು ಅಧ್ಯಕ್ಷ ಎಸ್.ಬಿ. ಮಹಮ್ಮದ್ ದಾರಿಮಿ ಉದ್ಘಾಟಿಸಿ ಮಾತನಾಡಿ ಶುಕ್ರಿಯಾ ಸಹೋದರರು ನಾಗರಿಕ ಸಮುದಾಯದೊಂದಿಗೆ ಇಟ್ಟುಕೊಂಡಿರುವ ಒಡನಾಟ, ಸ್ನೇಹ ಸಂಬಂಧ, ವ್ಯವಹಾರದಲ್ಲಿ ತೋರುವ ಸೇವಾ ಮನೊಭಾವದಿಂದಾಗಿ ಅವರ ಶುಕ್ರಿಯಾ ಗ್ರೂಪ್ ಆಫ್ ಕಂಪೆನಿ ಯಶಸ್ಸಿನ ಮೆಟ್ಟಿಲು ಏರುತ್ತಾ ಬಂದಿದ್ದು, ಇದೀಗ ಈ ಸಂಸ್ಥೆಗೆ ಇನ್ನೂ 2 ಸಹೋದರ ಸಂಸ್ಥೆ ಸೇರ್ಪಡೆ ಆಗಿದ್ದು, ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳಿಯಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ, ಉದ್ಯಮಿಗಳಾದ ಜಗದೀಶ್ ನಾಯಕ್ ಕರಾಯ, ಶಾಂತಾರಾಮ ಭಟ್ ಕಾಂಚನ, ಶ್ರೀಕಾಂತ್ ಪಟೇಲ್, ಶಶಿಧರ್ ರೈ, ಗಣೇಶ್ ಕುಮಾರ್ ಮಂಗಳೂರು, ಬಶೀರ್ ಕಬಕ, ಗಫೂರ್ ಮೂಡಬಿದ್ರೆ, ಮಹಮ್ಮದ್ ಅಬ್ಬಾಸ್, ಯಾಸಿರ್ ದೇರಳಕಟ್ಟೆ, ಫಾಯಿಝ್ ಸುಳ್ಯ, ಹಮೀದ್ ಕಾಂತಡ್ಕ, ಅಬ್ದುಲ್ ಖಾದರ್ ಉಳ್ಳಾಲ, ಬಶೀರ್ ಅಹಮದ್ ಬಂಟ್ವಾಳ, ಸವದ್ ಮಂಗಳೂರು, ಉಬೈಝ್ ಮಹಮ್ಮದ್, ಲೋಕೇಶ್, ಕಿಶೋರ್, ಸುಕೇಶ್, ಝುಬೈರ್, ರಿಝಾ ಮಂಗಳೂರು, ಸ್ಥಳೀಯ ಪ್ರಮುಖರಾದ ನಝೀರ್ ಮಠ, ರಫೀಕ್ ಗಂಡಿಬಾಗಿಲು, ತೋಜಾ ಉಮರಬ್ಬ, ಯೂಸು- ಹೋನೆಸ್ಟ್, ಶವದ್ ಕಾರ್ ಮೆಟಿಕ್, ಇಲ್ಯಾಸ್ ಕರಾಯ, ಖಾಲಿಸ್ ಮಹಮ್ಮದ್, ನೌಶದ್ ನೆಲ್ಯಾಡಿ, ಶುಕ್ರಿಯಾ ಸಹೋದರ ಸಂಸ್ಥೆಯ ಶುಕೂರ್ ಶುಕ್ರಿಯಾ, ಅಬ್ದುಲ್ ರಶೀದ್ ಶುಕ್ರಿಯಾ, ಅಬ್ದುಲ್ ರಹಿಮಾನ್, ಅಶ್ರ-, ಮುಸ್ತ-, ಕೆ. ಮಹಮ್ಮದ್ ಶಫೀಕ್, ರಾಝಿ, ಅಬ್ದುಲ್ ಖಾದರ್ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಖಾಮಿಲ್ ಸ್ವಾಗತಿಸಿ, ಯು.ಟಿ. ಇರ್ಷಾದ್ ವಂದಿಸಿದರು.