ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವೆ ಎ ಒಕ್ಕೂಟದ ಅಧೀನದಲ್ಲಿ ನೂತನ ಅಮೃತ ಸ್ವಸಾಯ ಸಂಘ ಉದ್ಘಾಟನೆಗೊಂಡಿತು. ಒಕ್ಕೂಟದ ಅಧ್ಯಕ್ಷ ಸುಂದರ ಬಲ್ಯಾಯ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.
ಸೇವಾ ಪ್ರತಿನಿಧಿ ರೇಖಾ ರೈ ದಾಖಲಾತಿ ಹಸ್ತಾಂತರಿಸಿದರು. ಸಂಘದ ಪ್ರಬಂಧಕರಾಗಿ ಧನಲಕ್ಷ್ಮಿ ಹಾಗೂ ಸಂಯೋಜಕರಾಗಿ ಹೇಮಲತಾರವರನ್ನು ಆಯ್ಕೆ ಮಾಡಲಾಯಿತು. ಸಂಘದ ಸದಸ್ಯರಾದ ಕೃತಿ ಬಲ್ಯಾಯ ಮಂಜುಳಾ, ಲೀಲಾ, ಪ್ರೇಮ, ಲಿಖಿತ, ಗೌತಮಿ ಉಪಸ್ಥರಿದ್ದರು.