ಪುತ್ತೂರು: ಆರ್ಯಾಪು ಗ್ರಾಮದ ಕೊಲ್ಯ ಸಮೀಪ ಬರೆ ಜರಿದು, 3-4 ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡ ಘಟನೆ ಜು.5ರಂದು ಸಂಭವಿಸಿದೆ. ಹಿಂದಿನ ವರ್ಷದ ಮಳೆಗೆ ಈ ಭಾಗದಲ್ಲಿ ಬರೆ ಜರಿದು, ಕಾಲನಿಯ ಸುಮಾರು 25 ಮನೆಗಳಿಗೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿತ್ತು. ಆ ಸಂದರ್ಭ ತಹಶೀಲ್ದಾರ್ ಸ್ಥಳ ಭೇಟಿ ನೀಡಿದ್ದರಾದರೂ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೇ ಸ್ಥಳದ ಸಮೀಪವೇ ಈಗ ಬರೆ ಜರಿದಿದ್ದು, ಮತ್ತೆ ಅಪಾಯಕ್ಕೆ ಆಹ್ವಾನ ನೀಡಿದೆ.