ಪುತ್ತೂರು: ಪುತ್ತೂರು ನಗರಸಭೆ ವ್ಯಾಪ್ತಿಯ ಬೊಳುವಾರು ಕರ್ಮಲದಲ್ಲಿ ಶ್ರೀ ವಿಶ್ವಕರ್ಮ ಸಭಾಭವನಕ್ಕೆ ಮತ್ತು ನಗರಸಭೆ ನೀರು ಸರಬರಾಜಿನ ಟ್ಯಾಂಕ್ಗೆ ಹೋಗುವ ರಸ್ತೆಯ ಬದಿಯಲ್ಲಿ ಮಣ್ಣು ಕುಸಿತಗೊಂಡಿದ್ದು, ರಸ್ತೆಯೇ ಕುಸಿಯುವ ಭೀತಿಯಲ್ಲಿದೆ.
ಬೊಳುವಾರು ಕರ್ಮಲದಲ್ಲಿ ಮುಖ್ಯರಸ್ತೆಯ ಪಕ್ಕದಲ್ಲಿರುವ ಧರೆಯ ಅಂಚಿನಲ್ಲಿ ರಸ್ತೆಯ ಬದಿಯಿಂದ ಮಣ್ಣು ಕುಸಿದಿದ್ದು, ಶ್ರೀ ವಿಶ್ವಕರ್ಮ ಸಭಾಭವನ ಮತ್ತು ಕುಡಿಯುವ ನೀರು ಸರಬರಾಜಿನ ಟ್ಯಾಂಕ್ಗೆ ಹೋಗುವ ರಸ್ತೆ ಕುಸಿಯುವ ಭೀತಿಯಲ್ಲಿದೆ. ರಸ್ತೆ ಕುಸಿದು ಬಿದ್ದರೆ ವಿಶ್ವಕರ್ಮ ಸಭಾಭವನಕ್ಕೆ ಹೋಗುವ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ತಕ್ಷಣ ನಗರಸಭೆ ಈ ಕುರಿತು ಕಾರ್ಯಪ್ರವೃತರಾಗುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.