ರೋಟರಿ ಕ್ಲಬ್ ಪುತ್ತೂರು ಸಿಟಿ ಪದ ಪ್ರದಾನ ಪ್ರಯುಕ್ತ ವಿವಿಧ ಕೊಡುಗೆಗಳ ಅನಾವರಣ

0

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಇದರ ನೂತನ ಅಧ್ಯಕ್ಷ ಕೆ.ಪ್ರಶಾಂತ್ ಶೆಣೈಯವರ ಮುಂದಾಳತ್ವದಲ್ಲಿ ಜು.5 ರಂದು ಪಡೀಲು ಎಂಡಿಎಸ್ ಟ್ರಿನಿಟಿ ಸಭಾಂಗಣದಲ್ಲಿ 2022-23ನೇ ವರ್ಷದ ಪದ ಪ್ರದಾನ ಸಮಾರಂಭ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಪ್ರಜ್ಞಾ ಆಶ್ರಮಕ್ಕೆ, ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಗೆ, ದರ್ಬೆ ಸಾರ್ವಜನಿಕ ಶೌಚಾಲಯಕ್ಕೆ, ಪುತ್ತೂರು ನಗರಸಭೆಯ ಸಾರ್ವಜನಿಕ ಶೌಚಾಲಯಕ್ಕೆ ವಿವಿಧ ಕೊಡುಗೆಗಳ ಅನಾವರಣ ಕಾರ್ಯಕ್ರಮ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.

 


ಪ್ರಜ್ಞಾ ಆಶ್ರಮ:
ಬೀರಮಲೆಯಲ್ಲಿ ವಾಸ್ತವ್ಯವಿರುವ ಮಾನಸಿಕ ವಿಕಲಚೇತನರ ಪ್ರಜ್ಞಾ ಆಶ್ರಮಕ್ಕೆ ರೋಟರಿ ಸಿಟಿ ಅಧ್ಯಕ್ಷ ಕೆ.ಪ್ರಶಾಂತ್ ಶೆಣೈಯವರ ತಾಯಿ ಶ್ರೀಮತಿ ರತಿ ಶೆಣೈಯವರ ಪ್ರಾಯೋಜಕತ್ವದಲ್ಲಿ ರೂ.17400  ವೆಚ್ಚದ ಇನ್ವರ್ಟರ್ ಬ್ಯಾಟರಿಯನ್ನು ಕೊಡುಗೆಯನ್ನು ನೀಡಲಾಯಿತು. ಆರ್.ಐ ಜಿಲ್ಲೆ 3181 ಇದರ ಜಿಲ್ಲಾ ಸಲಹೆಗಾರ ಪಿಡಿಜಿ ಸುರೇಶ್ ಚೆಂಗಪ್ಪರವರು ಉದ್ಘಾಟಿಸಿದರು. ಆಶ್ರಮದ ಮುಖ್ಯಸ್ಥ ಅಣ್ಣಪ್ಪ ದಂಪತಿ ಉಪಸ್ಥಿತರಿದ್ದರು.


ವಿಕ್ಟರ್ ಪ್ರೌಢಶಾಲೆ:
ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿನಿಯರಾದ ಶೈಲಾ ನಾಯಕ್ ಹಾಗೂ ಚಿತ್ರ ನಾಯಕ್‌ರವರ ಪ್ರಾಯೋಜಕತ್ವದಲ್ಲಿ ಎರಡು ನ್ಯಾಪ್ಕಿನ್ ಬರ್ನಿಂಗ್ ಮೆಶಿನ್ ಅನ್ನು ನೀಡಲಾಯಿತು. ಆರ್.ಐ ಜಿಲ್ಲೆ 3181 ಇದರ ಜಿಲ್ಲಾ ಸಲಹೆಗಾರ ಪಿಡಿಜಿ ಸುರೇಶ್ ಚೆಂಗಪ್ಪರವರು ಉದ್ಘಾಟಿಸಿದರು. ಶಾಲೆಯ ಮುಖ್ಯ ಗುರು ರೋಸ್ಲಿನ್ ಲೋಬೋರವರು ಸ್ವಾಗತಿಸಿ, ರೋಟರಿ ಸಿಟಿ ಸದಸ್ಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಸ್‌ರವರ ಮುಖೇನ ನಮಗೆ ಎರಡು ನ್ಯಾಪ್ಕಿನ್ ಬರ್ನಿಂಗ್ ಮೆಶಿನ್ ಸಿಗುವಂತಾಯಿತು ಎಂದರು. ಕಾರ್ಯಕ್ರಮದಲ್ಲಿ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಕೆವಿನ್ ಲಾರೆನ್ಸ್ ಡಿ’ಸೋಜ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಇನಾಸ್ ಗೊನ್ಸಾಲ್ವಿಸ್ ವಂದಿಸಿದರು.


ದರ್ಬೆ/ಕಿಲ್ಲೆ ಮೈದಾನದ ಸಾರ್ವಜನಿಕ ಶೌಚಾಲಯ:
ದರ್ಬೆ ಮೈದಾನದ ಸಾರ್ವಜನಿಕ ಶೌಚಾಲಯದಲ್ಲಿ ರೋಟರಿ ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈಯವರ ಪತ್ನಿ ಅಕ್ಷತಾ ಪಿ.ಶೆಣೈರವರ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ ಅನ್ನು ನಗರಸಭೆ ಪೌರಾಯುಕ್ತರಾದ ಮಧು ಎಸ್.ಮನೋಹರ್ ಹಾಗೂ ಆರೋಗ್ಯ ನಿರೀಕ್ಷಕಿ ಶ್ವೇತಾಕಿರಣ್‌ರವರು ಅನಾವರಣಗೊಳಿಸಿದರು. ನಗರಸಭೆ ವ್ಯಾಪ್ತಿಯ ಕಿಲ್ಲೆ ಮೈದಾನದಲ್ಲಿರು ಸಾರ್ವಜನಿಕ ಶೌಚಾಲಯದಲ್ಲಿ ರೋಟರಿ ಸಿಟಿ ಕಾರ್ಯದರ್ಶಿ ಜಯಗುರು ಆಚಾರ್‌ರವರ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್ ಅನ್ನು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್‌ರವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್‌ರವರು ರೋಟರಿ ಸಿಟಿ ಕಾರ್ಯಸಾಧನೆಯನ್ನು ಶ್ಲಾಘಿಸಿದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ, ವಲಯ ಸೇನಾನಿ ಪ್ರಮೋದ್ ಮಲ್ಲಾರ, ರೋಟರಿ ಭೀಷ್ಮ ಕೆ.ಆರ್ ಶೆಣೈ, ರೋಟರಿ ನೂತನ ಕೋಶಾಧಿಕಾರಿ ಕಿರಣ್ ಬಿ.ವಿ, ನಿಯೋಜಿತ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್, ಸದಸ್ಯರಾದ ಸುಧಾಕರ್ ಶೆಟ್ಟಿ, ದಯಾನಂದ ಕೆ.ಎಸ್, ಜ್ಯೋ ಡಿ’ಸೋಜ, ವಿಕ್ಟರ್ ಮಾರ್ಟಿಸ್, ಪದ್ಮನಾಭ ಶೆಟ್ಟಿ, ರಾಮಚಂದ್ರ ಪುಚ್ಚೇರಿ, ಜೆರೋಮಿಯಸ್ ಪಾಸ್, ಡೆನ್ನಿಸ್ ಮಸ್ಕರೇನ್ಹಸ್, ಲಾರೆನ್ಸ್ ಗೊನ್ಸಾಲ್ವಿಸ್, ಜಯಕುಮಾರ್ ಎಂ.ಆರ್, ಶ್ರೀಲತಾ ಶೆಣೈ, ಕೃಷ್ಣವೇಣಿ ರೈ ಸಹಿತ ಹಲವರು ಉಪಸ್ಥಿತರಿದ್ದರು. ರೋಟರಿ ಸಿಟಿ ನೂತನ ಕಾರ್ಯದರ್ಶಿ ಕೆ.ಪ್ರಶಾಂತ್ ಶೆಣೈರವರು ಸ್ವಾಗತಿಸಿ, ನೂತನ ಕಾರ್ಯದರ್ಶಿ ಜಯಗುರು ಆಚಾರ್ ವಂದಿಸಿದರು.

LEAVE A REPLY

Please enter your comment!
Please enter your name here