ಯೋಗ ಸಾಧಕಿ ಸಾನ್ವಿಗೆ ’ಪ್ರಜಾ ಭೂಷಣ ಪ್ರಶಸ್ತಿ’

0

ಕಡಬ: ಕರುನಾಡು ಸೇವಾ ಟ್ರಸ್ಟ್, ಮಂಡ್ಯ ಇದರ ಆಶ್ರಯದಲ್ಲಿ ನಡೆದ ಸಾಧಕರಿಗೆ ಪ್ರಶಸ್ತಿ-ಸನ್ಮಾನ ಕಾರ್ಯಕ್ರಮದಲ್ಲಿ ಕಡಬ ಮಾರುತಿ ಆಟೋ ವರ್ಕ್ಸ್‌ನ ಮಾಲಕ ನಿತ್ಯಾನಂದ ದೊಡ್ಡ ಮನೆ ಪಂಜ ಮತ್ತು ಸೀತಾಲಕ್ಷ್ಮಿ ದಂಪತಿಯ ಪುತ್ರಿ, ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿಯ ವಿದ್ಯಾರ್ಥಿನಿ ಸಾನ್ವಿಯವರಿಗೆ ಯೋಗ ಕ್ಷೇತ್ರದ ಸಾಧನೆಗಾಗಿ ’ಪ್ರಜಾ ಭೂಷಣ ಪ್ರಶಸ್ತಿ-2022’ಯನ್ನು ಜು.3ರಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಅಭಿನಂದನ್ ಯಂ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಡಾ.ಬಿ.ರೇವಣ್ಣ, ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನ ಅಧ್ಯಕ್ಷ ಮಾಡ್ದಿಕೆರೆ ಗೋಪಾಲ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here