ನೆಕ್ಕಿಲಾಡಿ: ಎಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ನಮ್ಮೂರು ನೆಕ್ಕಿಲಾಡಿ ಸಂಸ್ಥೆಯಿಂದ ಸನ್ಮಾನ

0

ಉಪ್ಪಿನಂಗಡಿ: ಕಳೆದ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ 34 ನೆಕ್ಕಿಲಾಡಿ ಗ್ರಾಮದ ವಿದ್ಯಾರ್ಥಿಗಳನ್ನು `ನಮ್ಮೂರು- ನೆಕ್ಕಿಲಾಡಿ’ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

 


ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ `ನಮ್ಮೂರು- ನೆಕ್ಕಿಲಾಡಿ’ ಅಧ್ಯಕ್ಷ ಜತೀಂದ್ರ ಶೆಟ್ಟಿ, ವಿದಾರ್ಥಿಗಳು ಕಲಿಕಾ ಹಂತದಲ್ಲಿಯೇ ಜೀವನದಲ್ಲಿ ಉತ್ತಮ ಗುರಿಯನ್ನಿಟ್ಟುಕೊಂಡು ಮುಂದೆ ಸಾಗಿದಾಗ ಅವರ ಭವಿಷ್ಯ ಉಜ್ವಲವಾಗಲು ಸಾಧ್ಯವಿದೆ. ಸಾಧಕರನ್ನು ಪ್ರೋತ್ಸಾಹಿಸಿ, ಬೆಂಬಲಿಸುವ ಕಾರ್ಯ ಸಮಾಜದಲ್ಲಿ ನಡೆದಾಗ ಅವರಿಂದ ಇನ್ನಷ್ಟು ಸಾಧನೆ ಸಾಧ್ಯವಿದೆ ಎಂದರು.
`ನಮ್ಮೂರು- ನೆಕ್ಕಿಲಾಡಿ’ಯ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್ ಮಾತನಾಡಿ, ಸಿಕ್ಕಿದ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಶುಭ ಹಾರೈಸಿದರು.

ನೆಕ್ಕಿಲಾಡಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಕಾವೇರಿ, ಶಿಕ್ಷಕಿ ಪೂರ್ಣಿಮಾ ಮಾತನಾಡಿ ಶುಭ ಹಾರೈಸಿದರು. ಬೇರಿಕೆ ನಾರಾಯಣ ನಾಯ್ಕ- ಮಮತಾ ದಂಪತಿಯ ಪುತ್ರಿ ಮಾನಸ, ಶಾಂತಿನಗರ ವಾಮನ ನಾಯ್ಕ- ವಿಮಲಾ ದಂಪತಿಯ ಪುತ್ರ ಸುಜಿತ್, ನೆಕ್ಕಿಲಾಡಿ ಪ್ರಭಾಕರ ನಾಯಕ್- ಶಾರದ ದಂಪತಿಯ ಪುತ್ರಿ ಪ್ರತೀಕ್ಷಾ, ನೆಕ್ಕಿಲಾಡಿ ಅಶ್ರಫ್- ಆಯೀಸಮ್ಮ ದಂಪತಿಯ ಪುತ್ರಿ ಸಫ್ನಾರ, ದರ್ಬೆ ಸುರೇಶ್- ಅನುರಾಧ ದಂಪತಿಯ ಪುತ್ರಿ ಅಕ್ಷತಾ, ನೆಕ್ಕಿಲಾಡಿಯ ಅಬ್ದುರ್ರಹ್ಮಾನ್ ಯುನಿಕ್- ಜಮೀಳಾ ದಂಪತಿಯ ಪುತ್ರಿ ಆಯಿಷತುಲ್ ರಶೀನಾ, ಬೇರಿಕೆ ಸತೀಶ್- ಪುಷ್ಪಾ ದಂಪತಿಯ ಪುತ್ರಿ ಪ್ರಜ್ಞಾ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಚಂದ್ರಹಾಸ ಶೆಟ್ಟಿ ಅಲಿಮಾರ್, `ನಮ್ಮೂರು- ನೆಕ್ಕಿಲಾಡಿ’ಯ ಶಬೀರ್ ಅಹಮ್ಮದ್, ಫಾರೂಕ್ ಝಿಂದಗಿ ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ನಮ್ಮೂರು- ನೆಕ್ಕಿಲಾಡಿ ಕಾರ್ಯದರ್ಶಿ ಖಲಂದರ್ ಶಾಫಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here