ಪುತ್ತೂರು:ಪಡ್ನೂರು ಗ್ರಾಮದ ಕುಂಜಾರು ಮದಗ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆಯಲಿರುವ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾಗಿ ರೇಖಾ ಆಟಿಕ್ಕು ಹಾಗೂ ಕಾರ್ಯದರ್ಶಿಯಾಗಿ ರಮ್ಯ ಪಟ್ಟೆಯವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಶಿಕಲಾ ದೇವರಗುಡ್ಡೆ, ಸುಮಿತ್ರಾ ಮುಂಡಾಜೆ, ಸವಿತಾ ಕುಂಜಾರು, ಜತೆ ಕಾರ್ಯದರ್ಶಿಗಳಾಗಿ ರೇಣುಕಾ ಕುಂಜಾರು, ರಾಧಿಕಾ ಕುಂಜಾರು ಕೋಶಾಧಿಕಾರಿಯಾಗಿ ಅನಿತಾ ಕುಂಜಾರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕರೆ ವೆಂಕಟ್ರಮಣ ಭಟ್ರವರ ಅಧ್ಯಕ್ಷತೆಯಲ್ಲಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ವ್ಯವಸ್ಥಾಪನ ಸಮಿತಿ ಸದಸ್ಯರಾದ ಚೈತ್ರನಾರಾಯಣ ಸೇಡಿಯಾಪು, ಬಾಲಕೃಷ್ಣ ಜೋಯಿಸ ಯರ್ಮುಂಜ, ಯಶೋಧರ್ ಕುಂಜಾರು, ಮಧುಸೂದನ್ ಪಡ್ಡಾಯೂರು, ಪುಷ್ಪ ದೇಂತಡ್ಕ ಜಯಂತಿ, ವರ ಮಹಾಲಕ್ಷ್ಮಿ ಪೂಜಾ ಸಮಿತಿಯ ಮಾಜಿ ಅಧ್ಯಕ್ಷರಾದ ರಮಣಿ ಗಾಣಿಗ, ವೀಣಾ ಮಾತಾವು, ರೂಪ ಪೆರ್ಯೋಡಿ, ದೇವಸ್ಥಾನದ ಅರ್ಚಕರಾದ ಶ್ರೀಕಾಂತ್ ಭಟ್, ಚಂದ್ರ ಶೇಖರ್ ಮಯ್ಯ ಸಭೆಯಲ್ಲಿ ಉಪಸ್ಥಿತರಿದ್ದರು ಉಪಸ್ಥಿತರಿದ್ದರು.