ಬೆನ್‌ಝಾರ್ ಮೆನ್ಸ್ ವೇರ್ ಶುಭಾರಂಭ

0

ಪುತ್ತೂರು : ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್ ಸ್ಟೇಂಡ್ ಎದುರುಗಡೆಯ ಸೂಪರ್ ಟವರ್‌ನಲ್ಲಿ ಜು.6ರಂದು ಬೆನ್‌ಝಾರ್ ಮೆನ್ಸ್ ವೇರ್ ಶುಭಾರಂಭಗೊಂಡಿತು. ಸಾಲ್ಮರ ಹಾಜಿ ಸಯ್ಯದ್ ಮುಹಮ್ಮದ್ ತಂಙಳ್ ಮತ್ತು ಹಾಜಿ ಉಸ್ತಾದ್ ಪಿ.ಎಮ್ ಉಮ್ಮರ್ ದಾರಿಮಿರವರು ದುವಾ ನೆರವೇರಿಸಿದರು.
ದ.ಕ.ಇಂಟೆಕ್ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಶೆಟ್ಟಿ, ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಎಸ್‌ಡಿಪಿಐ ಪುತ್ತೂರು ಅಧ್ಯಕ್ಷ ಇಬ್ರಾಹಿಮ್ ಸಾಗರ್, ಸಾಲ್ಮರ ಸಯ್ಯದ್ ಮಲೆ ಜುಮಾ ಮಸೀದಿ ಅಧ್ಯಕ್ಷ ನೂರುದ್ದೀನ್ ಸಾಲ್ಮರ, ಹಸೈನಾರ್ ಪಿ.ಎಸ್. ಕೆರೆಮೂಲೆ, ನಗರಸಭಾ ಮಾಜಿ ಸದಸ್ಯ ಅನ್ವರ್ ಕಾಸಿಂ, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಪುತ್ತೂರು ಫ್ಲವರ್ ಗೈಸ್‌ನ ಹರೀಶ್ ಕಲ್ಲಾರೆ, ಪುತ್ತೂರು ತಾಜ್ ಕೆಟರ‍್ಸ್ನ ಅಶ್ರಫ್ ಬಾವು, ನ್ಯಾಯವಾದಿ ಜಯರಾಮ ರೈ, ಪುತ್ತೂರು ಎಎಫ್‌ಸಿ ಶರತ್ ಕೇಪುಳು ಶುಭಹಾರೈಸಿದರು. ಮಾಲಕರಾದ ನವಾಜ್ ಸಾಲ್ಮರ ಸ್ವಾಗತಿಸಿ ಎಲ್ಲರ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here