ಸಾಮೆತ್ತಡ್ಕ:ಇನ್ನೇನು ರಸ್ತೆಗೆ ಬೀಳಲಿದೆ ಮರ

0

ಪುತ್ತೂರು: ಕಳೆದ ಹಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಪರಿಸರ ಹಾನಿ ವರದಿಗಳು ಪತ್ರಿಕೆಯಲ್ಲಿ ಪ್ರಕಟವಾಗಿವೆ ಮಾತ್ರವಲ್ಲದೆ ಸಾಕಷ್ಟು ಕಡೆ ಪ್ರಾಣ ಹಾನಿ ಕೂಡ ಸಂಭವಿಸಿವೆ.

 


ಇಲ್ಲಿನ ಸಾಮೆತ್ತಡ್ಕ ಸುದಾನ ಸ್ಪೋರ್ಟ್ಸ್ ಕ್ಲಬ್ ಬಳಿಯ ರಸ್ತೆ ಬದಿಯಲ್ಲಿನ ಮರವೊಂದು ಭಾರೀ ಮಳೆಗೆ ಕುಸಿದು ರಸ್ತೆಗೆ ಬೀಳುವ ಪರಿಸ್ಥಿತಿ ಎದುರಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರೋರ್ವರು ಪುತ್ತೂರು ನಗರಸಭೆಯ ಪೌರಾಯುಕ್ತರಿಗೆ, ಆರೋಗ್ಯ ನಿರೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ. ಈಗಾಗಲೇ ಮರವೊಂದು ರಸ್ತೆಗೆ ಮುಕ್ಕಾಲು ಭಾಗ ಅಡ್ಡವಾಗಿ ಬಿದ್ದಿದೆ. ಇನ್ನು ಪೂರ್ತಿ ಬಿದ್ದು ರಸ್ತೆ ಮುಚ್ಚುವ ಮೊದಲು ಸಂಬಂಧಪಟ್ಟವರು ಎಚ್ಚರಗೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.

LEAVE A REPLY

Please enter your comment!
Please enter your name here