ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಸದಸ್ಯ ಮಂಜುನಾಥ ಪಡೀಲ್‌ರವರಿಗೆ ಕಿಟ್ ವಿತರಣೆ

0

ಪುತ್ತೂರು : ಸ್ನೇಹ ಸಂಗಮ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಮತ್ತು ಸಂಘದ ಬೆಳ್ಳಿಹಬ್ಬ ಸಮಿತಿಯ ವತಿಯಿಂದ ಸಂಘದ ಸದಸ್ಯ, ಅಪಘಾತದಿಂದ ಚಿಕಿತ್ಸೆ ಪಡೆಯುತ್ತಿರುವ ಮಂಜುನಾಥ ಪಡೀಲ್‌ರವರಿಗೆ ಒಂದು ತಿಂಗಳಿಗೆ ಬೇಕಾಗುವ ಅಕ್ಕಿ ಮತ್ತು ದಿನಸಿ ಸಾಮಾಗ್ರಿಗಳ ಕಿಟ್‌ನ್ನು ನೀಡಲಾಯಿತು. ಸಂಘದ ಗೌರವಾಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಸಂಘದ ಅಧ್ಯಕ್ಷ ಅರವಿಂದ ಪೇರಿಗೇರಿ, ಪ್ರಧಾನ ಕಾರ್ಯದರ್ಶಿ ತಾರನಾಥ ಗೌಡ ಬನ್ನೂರು, ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತಡ್ಕ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು, ಸದಸ್ಯರಾದ ವಿಶ್ವನಾಥ್ ಪೇರಿಗೇರಿ, ಶಶಿಧರ ಸಿಟಿಗುಡ್ಡೆ, ರೋಹಿದಾಸ್ ಪರ್ಲಡ್ಕ, ಲಕ್ಷ್ಮಣ ಬನ್ನೂರು, ಪದ್ಮನಾಭ ದರ್ಬೆ ಸಹಕರಿಸಿದರು.

LEAVE A REPLY

Please enter your comment!
Please enter your name here