ಸೂರಿಕುಮೇರ್ : ಟ್ಯಾಂಕರ್-ತೂಫಾನ್:ವ್ಯಾನ್ ನಡುವೆ ಅಪಘಾತ-ಓರ್ವನಿಗೆ ಗಾಯ

0

ವಿಟ್ಲ: ಟ್ಯಾಂಕರ್ ಹಾಗೂ ತೂಫಾನ್ ವ್ಯಾನ್ ನಡುವೆ ನಡೆದ ಅಪಘಾತದಲ್ಲಿ ತೂಪಾನ್ ವಾಹನದ ಚಾಲಕ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ೭೫ರ ಸೂರಿಕುಮೇರು ಎಂಬಲ್ಲಿ ನಡೆದಿದೆ. ಅಪಘಾತದಿಂದಾಗಿ ತೂಫಾನ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

 


ತೂಪಾನ್ ಚಾಲಕ ಸೇರಾ ನಿವಾಸಿ ಸುರೇಂದ್ರರವರು ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೇರದಲ್ಲಿರುವ ಗೇರು ಬೀಜದ ಫ್ಯಾಕ್ಟರಿಯ ಕೆಲಸಗಾರರನ್ನು ಸಾಯಂಕಾಲದ ಅವರ ಮನೆಗೆ ಬಿಟ್ಟು ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಒಂದು ಕಡೆ ಧಾರಾಕಾರವಾಗಿ ಸುರಿಯುವ ಮಳೆ ಇನ್ನೊಂದು ಕಡೆ ರಸ್ತೆ ಕಾಮಗಾರಿ ಯ ಅವಾಂತರ. ಇತ್ತೀಚಿನ ದಿನಗಳಲ್ಲಿ ನಡೆಯುವ ಅಪಘಾತ ಗಳಿಗೆ ರಸ್ತೆ ಕಾಮಗಾರಿಯೇ ಕಾರಣ ವೆನ್ನುವ ಆರೋಪ ನಾಗರಿಕರಿಂದ ಕೇಳಿಬಂದಿದೆ.

LEAVE A REPLY

Please enter your comment!
Please enter your name here