ಹೂಗುಚ್ಛ ನೀಡಿ ಅಭಿನಂದಿಸಿದ ಬೆಳ್ತಂಗಡಿ ಸುದ್ದಿ ಪತ್ರಿಕೆ ಮತ್ತು ಚಾನೆಲ್ ನ ಪಾಲುದಾರರಾದ ಸಿಂಚನಾ ಊರುಬೈಲು
ಬೆಂಗಳೂರು: ರಾಜ್ಯಸಭೆಗೆ ನಾಮ ನಿರ್ದೇಶನರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಬೆಂಗಳೂರಿನಲ್ಲಿ ಸುದ್ದಿ ಸಮೂಹ ಸಂಸ್ಥೆಗಳ ಪರವಾಗಿ ಅಭಿನಂದಿಸಲಾಯಿತು. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ನಿವಾಸಕ್ಕೆ ತೆರಳಿದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾಗಿರುವ ಡಾ.ಯು ಪಿ ಶಿವಾನಂದ್ರವರ ಪುತ್ರಿ ಬೆಳ್ತಂಗಡಿ ಸುದ್ದಿ ಪತ್ರಿಕೆ ಮತ್ತು ಬೆಳ್ತಂಗಡಿ ಸುದ್ದಿ ವಾಹಿನಿಯ ಪಾಲುದಾರರಾದ ಸಿಂಚನಾ ಊರುಬೈಲು ಹೂಗುಚ್ಛ ನೀಡಿ ಅಭಿನಂದಿಸಿದರು.
ಈ ವೇಳೆ ಸುದ್ದಿ ಪತ್ರಿಕೆಯನ್ನೂ ನೀಡಿದರು. ಈ ವೇಳೆ ವೀರೇಂದ್ರ ಹೆಗ್ಗಡೆಯವರ ಸಹೋದರ ಸುರೇಂದ್ರಕುಮಾರ್, ಹರ್ಷೇಂದ್ರ ಕುಮಾರ್ ರವರ ಪುತ್ರ ಶ್ರೇಯಸ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ ಉಪಸ್ಥಿತರಿದ್ದರು.