ಕಾಣಿಯೂರು: ಕಾಣಿಯೂರು ಎ.ಆರ್ ಕಾಂಪ್ಲೆಕ್ಸ್ನಲ್ಲಿ ಕಾಣಿಯೂರು ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪ ಶ್ರೀ ಗುರು ಮೆನ್ಸ್ ಬ್ಯೂಟಿ ಪಾಯಿಂಟ್ ಜು.7ರಂದು ಶುಭಾರಂಭಗೊಂಡಿದೆ.
ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರಾದ ನಿರಂಜನ ಆಚಾರ್ ಅವರು ಉದ್ಘಾಟನೆಯನ್ನು ನೆರವೇರಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು. ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡ ಶುಭ ಹಾರೈಸಿದರು. ಧರ್ಣಪ್ಪ ಗೌಡ ಅಂಬುಲ, ಕಾಣಿಯೂರು ಸ.ಹಿ.ಪ್ರಾ.ಶಾಲಾ ಎಸ್ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಹರಿಪ್ರಸಾದ್ ರೈ ಕಾಣಿಯೂರು, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ, ಬೆಳಂದೂರು ಗ್ರಾ.ಪಂ.ಸದಸ್ಯ ಜಯಂತ ಅಬೀರ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ವೀರಪ್ಪ ಗೌಡ ಕಾಣಿಯೂರು, ತನುಷ್ ಎಂಟರ್ಪ್ರೈಸಸ್ನ ರವಿರಾಜ್ ಚಾರ್ವಾಕ, ದಿಲೀಪ್ ಅಂಬುಲ, ಸಂಸ್ಥೆಯ ಮಾಲಕರ ತಾಯಿ ರೇವತಿ ಸವಣೂರು, ಸಹೋದರ ದೀಕ್ಷಿತ್ ಭಂಡಾರಿ ಸವಣೂರು, ಸಂಜೀವ ಭಂಡಾರಿ ಸವಣೂರು, ಕುಸುಮಾಧರ ಅಭಿಕಾರ, ಚಾರ್ವಾಕ ಸಿ.ಎ ಬ್ಯಾಂಕ್ ಸಿಬ್ಬಂದಿ ಭವತ್ ಅಗಳಿ, ಯಶವಂತ ಕಳುವಾಜೆ, ಚಂದ್ರಶೇಖರ ರಾಶಿ ಕಾಂಪ್ಲೆಕ್ಸ, ಬಾಲಕೃಷ್ಣ ಕಾಣಿಯೂರು ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕ ರಕ್ಷಿತ್ ಭಂಡಾರಿ ಸವಣೂರು ಅವರು ಅತಿಥಿಗಳನ್ನು ಬರಮಾಡಿಕೊಂಡು ಸ್ವಾಗತಿಸಿದರು.