ಪುತ್ತೂರು: ಸವಣೂರು ಕುಮಾರಧಾರ ರಿಕ್ಷಾ ಚಾಲಕ-ಮಾಲಕರ ಸಂಘದ 2022-23ನೇ ಸಾಲಿನ ಮಹಾಸಭೆಯು ಸವಣೂರು ಶ್ರೀ ವಿನಾಯಕ ಸಭಾಭವನದಲ್ಲಿ ಜರಗಿತು. ಸಂಘದ ಗೌರವಾಧ್ಯಕ್ಷ ಸುದರ್ಶನ್ ನಾಯ್ಕ್ ಕಂಪ ಮತ್ತು ಗೌರವ ಸಲಹೆಗಾರ ಕರುಣಾಕರ ಪೂಜಾರಿ ಪಟ್ಟೆರವರು ಉಪಸ್ಥಿತರಿದ್ದು, ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ನಡೆಸಿಕೊಟ್ಟರು.
ನೂತನ ಪದಾಧಿಕಾರಿಗಳ ವಿವರ
ಅಧ್ಯಕ್ಷರಾಗಿ ಹಸೈನಾರ್ ಕಾಯರ್ಗ, ಉಪಾಧ್ಯಕ್ಷರಾಗಿ ಹೊನ್ನಪ್ಪ ಪೂಜಾರಿ, ಕಾರ್ಯದರ್ಶಿಯಾಗಿ ರಾಧಾಕೃಷ್ಣ ಪುಣ್ಚಪ್ಪಾಡಿ, ಉಪಕಾರ್ಯದರ್ಶಿಯಾಗಿ ಇಬ್ರಾಹಿಂ, ಕೋಶಾಧಿಕಾರಿಯಾಗಿ ರಾಘವೇಂದ್ರ ಹಾಗೂ ಕಾರ್ಯಕಾರಿ ಸಮಿತಿ ಸಮಿತಿ ಸದಸ್ಯರುಗಳಾಗಿ ಇಬ್ರಾಹಿಂ ಗುಂಡಿಲ, ಅಂಗಾರ, ಲತೀಫ್, ಸ್ವಸ್ತಿಕ್ ಜಿ.ಪಿ, ಉಮೇಶ್ ಆರೇಲ್ತಡಿ, ಖಲಂಧರ್, ಕುಸುಮಾಧರ ಪೆರಿಯಡ್ಕ, ಅಬ್ದುಲ್ಲ ಬಸ್ತಿ, ಕೇಶವ ಕನ್ಯಾಮಂಗಲ, ರಾಮಚಂದ್ರ ಕುಮಾರಮಂಗಲ, ಇಸ್ಮಾಯಿಲ್ ಚಾಪಳ್ಳ, ದಾಮೋದರ ಗೌಡ ಪಟ್ಟೆ, ಸಾಂತಪ್ಪ ಸಾರಕರೆ, ಕೇಶವ ಬಸ್ತಿ, ಮಹಮ್ಮದ್, ಚೇತನ್ ಪಟ್ಟೆ ಹಾಗೂ ಆಶೋಕ್ ಸಾರಕರೆರವರುಗಳನ್ನು ಆಯ್ಕೆ ಮಾಡಲಾಗಿದೆ