ಪರಿವಾರ ಬಂಟರ ಸಂಘ (ರಿ) ಮಂಗಳೂರು ಕೇಂದ್ರ ಸಮಿತಿ: ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಪರಿವಾರ ಬಂಟರ ಸಂಘ (ರಿ) ಮಂಗಳೂರು ಇದರ ಕೇಂದ್ರ ಸಮಿತಿ ಸದಸ್ಯರ ಪ್ರಥಮ ಸಭೆಯು ಪುತ್ತೂರು ಮುಖ್ಯರಸ್ತೆಯಲ್ಲಿರುವ ರಾಮ್ ಕಮಲ್ ಕಾಂಪ್ಲೆಕ್ಸ್ ನಲ್ಲಿರುವ ಸಂಘದ ಪುತ್ತೂರು ವಲಯದ ಕಛೇರಿಯಲ್ಲಿ ನಡೆಯಿತು. ಸಭೆಯಲ್ಲಿ ಪರಿವಾರ ಬಂಟರ ಸಂಘ (ರಿ) ಮಂಗಳೂರು ಇದರ 2022-2025ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಜರಗಿತು.

ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷರಾಗಿರುವ ಸಂತೋಷ್ ಕುಮಾರ್ ಎ. ಕಾಯರ್ ಮಜಲು, ಅವಿರೋಧವಾಗಿ ಪುನ: ಆಯ್ಕೆಯಾದರು. ಉಪಾಧ್ಯಕ್ಷರಾಗಿ ಡಾ. ಜಯಪ್ರಕಾಶ್ ನಾಯ್ಕ್ ಬಜಲಕರಿಯ, ಪ್ರಧಾನ ಕಾರ್ಯದರ್ಶಿಯಾಗಿ ಮನೋಹರ ನಾಯ್ಕ್ ಕೊಳಕ್ಕಿಮಾರ್, ಜತೆಕಾರ್ಯದರ್ಶಿಯಾಗಿ ಅಶೋಕ್ ನಾಯ್ಕ್ ಪಾಂಡಿ ಅಡೂರು, ಕೋಶಾಧಿಕಾರಿಯಾಗಿ ವಿಶಾಲಾಕ್ಷಿ.ವಿ.ನಾಯ್ಕ್ ಮಂಗಳೂರು ಅವಿರೋಧವಾಗಿ ಆಯ್ಕೆಗೊಂಡರು. ಸದಸ್ಯರುಗಳಾಗಿ ಸದಾಶಿವ ನಾಯ್ಕ್ ತೆಂಕಿಲ, ಶಶಿಧರ ನಾಯ್ಕ್ ಬೆಂಗಳೂರು, ಪುನೀತ್ ನಾಯ್ಕ್ ಕೊಕ್ಕಡ, ದಯಾನಂದ ನಾಯ್ಕ್ ಮೇಲಿನ ಮನೆ ಕಡಬ, ಬಿ.ಜಿ. ಪುರುಷೋತ್ತಮ ನಾಯ್ಕ್ ವಿರಾಜಪೇಟೆ, ಸತೀಶ್ ಎ. ನಾಳ, ವಿಠಲ ನಾಯ್ಕ್ ಸುಳ್ಯ, ರಾಜ್‌ಪ್ರಸಾದ್ ನಾಯ್ಕ್ ವರ್ಕಾಡಿ, ಬಿ. ಸುರೇಶ್ ನಾಯ್ಕ್ ಕಾಸರಗೋಡು, ಉದಯಶಂಕರ ನಾಯ್ಕ್ ಮಂಗಳೂರು ಆಯ್ಕೆಯಾದರು.

ಸಭೆಯಲ್ಲಿ ನಿಕಟಪೂರ್ವ ಉಪಾಧ್ಯಕ್ಷರಾದ ಉಮೇಶ್ ನಾಯ್ಕ್ ಪಿಲಿಕಲ, ಕೇಂದ್ರ ಸಮಿತಿ ಸದಸ್ಯರುಗಳಾದ ರಘುನಾಥ್ ನಾಯ್ಕ್ ವೀರಮಂಗಲ, ಮಹಾಲಿಂಗ ನಾಯ್ಕ್(ಯೋಗೀಶ್), ಕಾಸರಗೋಡು, ರೂಪ ಸುರೇಶ್ ಕಾಸರಗೊಡು, ಸ್ಮಿತಾ ಸುಜೀತ್ ನಾಯ್ಕ್ ಹಣಿಯೂರು, ಪುಷ್ಪರಾಜ್ ನಾಯ್ಕ್, ಮಂಗಳೂರು, ರವೀಂದ್ರ ನಾಯ್ಕ್ ಬಲವಂತಡ್ಕ, ಅಡೂರು, ಸುಧಾಕರ ಮಜಲು ನಾಳ, ವಿಧ್ಯಾಧರ್ ನಾಯ್ಕ್ ವರ್ಕಾಡಿ, ಶಾಂತಾ ಆರ್ ನಾಯ್ಕ್, ವರ್ಕಾಡಿ ಉಪಸ್ಥಿತರಿದ್ದರು. ನಿಕಟಪೂರ್ವ ಪ್ರ.ಕಾರ್ಯದರ್ಶಿ ಸುಧಾಕರ ಕೆಪಿ. ಸ್ವಾಗತಿಸಿದರು. ಮುಖ್ಯಕಾರ್ಯ ನಿರ್ವಚನಾಧಿಕಾರಿಯಾಗಿ ಬಾಲಕೃಷ್ಣ ನಾಯ್ಕ್ ಅಮೈ, ಕಾಸರಗೋಡು, ಸಹಾಯಕರುಗಳಾಗಿ ಎ.ಟಿ. ನಾಯ್ಕ್, ಕಾಸರಗೋಡು ಮತ್ತು ಶಾಂತಕುಮಾರ್ ನಾಯ್ಕ್ ನೆಲಪ್ಪಾಲ ರವರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಬಳಿಕ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷರಾದ ಸಂತೋಷ್ ಕುಮಾರ್.ಎ ರವರು ಸಂಘದ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ನೂತನ ಪ್ರ.ಕಾರ್ಯದರ್ಶಿ ಮನೋಹರ್ ನಾಯ್ಕ್ ವಂದಿಸಿದರು.

LEAVE A REPLY

Please enter your comment!
Please enter your name here